ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ 1962 ರಿಂದ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವೈದ್ಯ ವೃತ್ತಿಯನ್ನು ನಡೆಸುತ್ತಾ ಬಂದಿರುವ ವೈದ್ಯರಾದ ಟಿ. ಎನ್. ತುಳಪುಳೆ (88) ದೀರ್ಘಕಾಲದ ಅನಾರೋಗ್ಯದ ಬಳಿಕ ಜನವರಿ 17ರಂದು ವಿಧಿವಶರಾದರು. ಮೃತ ಟಿ. ಎನ್. ತುಳಪುಳೆ ಹವ್ಯಾಸಿ ಹರಿಕಥೆ ದಾಸರಾಗಿಯೂ ಗುರುತಿಸಿಕೊಂಡಿದ್ದರು. ಜ್ಯೋತಿಷ್ಯ ಶಾಸ್ತ್ರವನ್ನೂ ಬಲ್ಲವರಾಗಿದ್ದರು.
ಸಾಹಿತಿಯಾಗಿ ಹತ್ತಾರು ಕನ್ನಡ ಕೃತಿಗಳನ್ನು ರಚಿಸಿರುವ ಇವರ ಮನೆಯಲ್ಲಿ ಆಧ್ಯಯನ ಯೋಗ್ಯ ಸಾವಿರಾರು ಕನ್ನಡ ಹಾಗೂ ಇತರ ಗ್ರಂಥಗಳ ಲೈಬ್ರೆರಿಯೇ ಇದೆ.. 2013 ರಲ್ಲಿವೇಣೂರಿನಲ್ಲಿ ನಡೆದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.