News Karnataka Kannada
Sunday, April 28 2024
ಮಂಗಳೂರು

ಹಾಸ್ಯದ ಮೂಲಕ ಜನರ ಮನಸ್ಸು ಗೆದ್ದ ಯುವ ಕಲಾವಿದ ಶಿವಪ್ರಸಾದ್ ನಿಧನ

Shivaprasad
Photo Credit :
ಬಂಟ್ವಾಳ:  ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್ ಕೆ(23) ಜ.16 ರಂದು ನಿಧನರಾದರು.
ಶಿವಪ್ರಸಾದ್ ಕಬಡ್ಡಿ ಆಟಗಾರನಾಗಿದ್ದು, ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು ಎಂದು ತಿಳಿದು ಬಂದಿದೆ.
ಮೃತರು ತಾಯಿ,ಸಹೋದರಿ, ಸಹೋದರ ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.ಕಳೆದ ಎರಡು ವರ್ಷಗಳಲ್ಲಿ ಹಾಸ್ಯದ ಮೂಲಕ ಜನರ ಮನಸ್ಸು ಗೆದ್ದ ಯುವ ಕಲಾವಿದ ಶಿವಪ್ರಸಾದ್ ಎಂಬ ಅಪ್ಪಟ್ಟ ದೇಶಪ್ರೇಮಿಯ ಕನಸು ನನಸಾಗದೆ ಜೀವನ ಅಂತ್ಯ ಕಂಡಿದೆ.
ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮನರಂಜನೆ ಮೂಲಕ ರಂಜಿಸಿದ ಶಿವಪ್ರಸಾದ್ ಅತ್ಯಂತ ಹೆಚ್ಚು ಜನಪ್ರಿಯತೆ ,  ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದ. ಸ್ನೇಹ ಜೀವಿ, ಬಾಲ್ಯದಿಂದಲೇ ದೇಶಸೇವೆಯ ಅಭಿಮಾನಹೊಂದಿದ್ದ ಈತ  ಸೈನಿಕನಾಗಬೇಕು ಎಂಬ ಕನಸು ಈತನಾಗಿತ್ತು.
ಇದಕ್ಕಾಗಿ ಜಿಮ್ ಮತ್ತು ಇತರ ವ್ಯಾಯಾಮ ದಲ್ಲಿ ಸದಾ ತೊಡಗಿಸಿಕೊಂಡಿದ್ದ.ಇತ್ತೀಚಿಗೆ ಸೈನಿಕ ಸೇವೆಗೆ ಪೂರಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ.
 ಅನೇಕ ಕನಸುಗಳನ್ನು ಹೊಂದಿದ್ದ ಯುವಕನಿಗೆ ಕನಸುಗಳನ್ನು ನನಸು ಮಾಡಲು ಅವಕಾಶ ಸಿಗದೆ ಹೋಯಿತು ಎಂಬ‌ ಬೇಸರ ಮಾಣಿ ಗ್ರಾಮದ ಜನತೆಯದ್ದು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು