ಬಂಟ್ವಾಳ: ಮಾಣಿಲ ಗ್ರಾಮದ ಕನ್ನಡಗುಳಿ – ಕೂಟೇಲು ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿದ್ದು, ಅದನ್ನು ತೆರವು ಮಾಡಿ ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿರುವ ಮಾಣಿಲ ಗ್ರಾ.ಪಂ.ವಿರುದ್ಧ ಪ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡುರವರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಬಳಿಕದ ಬೆಳವಣಿಗೆಯಲ್ಲಿ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ಪಂಚಾಯತ್ ಅಧಿಕೃತರು ಜ.೧೮ರಿಂದ ರಸ್ತೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡುರವರ ಮಾತನಾಡಿಕಳೆದ ಹಲವಾರು ವರುಷಗಳಿಂದ ಈ ರಸ್ತೆಯ ಅಭಿವೃದ್ದಿ ಆಗದೆ ಹಿನ್ನಡೆಯಾಗಿದ್ದು, ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು ಆ ಬಗ್ಗೆ ನಾವು ಹಲವಾರು ಭಾರಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ ಬಳಿಕ ಇದೀಗ ಪಂಚಾಯತ್ ಆಡಳಿತ ಮಂಡಳಿ ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದು ವಿಷ್ಣು ಭಟ್ ರವರಿಗೆ ಹೆದರಿ ಕಾಮಗಾರಿಯನ್ನು ಆರಂಬಿಸಿಲ್ಲ ಎಂದು ಆರೋಪಿಸಿದರು. ಪ್ರತಿಭಟನಾ ಕಾರರನ್ನು ಸಮಾಧಾನಿಸಲು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ದೇವಪ್ಪ ಪಿ.ಆರ್. ಪ್ರಯತ್ನ ಪಟ್ಟರಾದರೂ, ರಸ್ತೆ ಕಾಮಗಾರಿ ಆರಂಭಿಸದೆ ನಾವು ಸ್ಥಳದಿಂದ ಕದಲಲಾರೆವು ಎಂದು ಪಟ್ಟು ಹಿಡಿದ ಪ್ರತಿಭಟನಾ ಕಾರರು ಪಂಚಾಯತ್ ಮುಂಭಾಗದಲ್ಲಿ ಧರಣಿ ಕೂತರು.
ಸ್ಥಳದಲ್ಲಿ ವಿಟ್ಲ ಪೊಲೀಸ್ ಠಾಣಾ ಎಸ್.ಐ ಸಂದೀಪ್ ಶೆಟ್ಟಿ ಭಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಬಳಿಕ ಗ್ರಾ.ಪಂ ಕಚೇರಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ವನಿತಾ, ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್, ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡು ಸಹಿತ ಕೆಲ ಪ್ರತಿಭಟನಾ ಕಾರರ ಮಧ್ಯೆ ಮಾತುಕತೆ ನಡೆಯಿತು. ಬಳಿಕ ಗ್ರಾ.ಪಂ.ಅಧಿಕಾರಿಗಳು ಜ.೧೮ರಿಂದ ರಸ್ತೆ ಕಾಮಗಾರಿಯನ್ನು ನಡೆಸಿಕೊಡುವ ಭರವಸೆಯನ್ನು ನೀಡಿದರು ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಜಿಲ್ಲಾಧ್ಯಕ್ಷ ಚಂದ್ರಶೇಖರ ಯು. ವಿಟ್ಲ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಬಂಟ್ವಾಳ ತಾಲೂಕು ಶಾಖಾ ಗೌರವಾಧ್ಯಕ್ಷ ಕುಶಾಲಪ್ಪ ಮೂಡಂಬೈಲು, ಪಾಣೆಮಂಗಳೂರು ಹೋಬಳಿ ಶಾಖಾ ಅಧ್ಯಕ್ಷರು ನಾಗೇಶ್ ಮುಡಿಪು, ಬಂಟ್ವಾಳ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಪಾಲ್ತಾಜೆ, ಗೌರವ ಸಲಹೆಗಾರರಾದ ವಿಮಲ ಸೀಗೆಬಲ್ಲೆ, ಮಹಿಳಾ ಘಟಕದ ಉಪಾಧ್ಯಕ್ಷರು ವಿಮಲ ಮುಳಿಯ, ಬಂಟ್ವಾಳ ತಾಲೂಕು ಶಾಖಾ ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ರಸ್ತೆ ಫಲಾನುಭವಿಗಳಾದ ಗಣೇಶ್ ಕೂಟೇಲು, ಮಂಜಪ್ಪ ಮೂಲ್ಯ, ಕಾಂತಪ್ಪ, ಮುದ್ದಮುಗೇರ, ಕಮಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು