ಬೆಳ್ತಂಗಡಿ: ಅಳದಂಗಡಿ ಸನಿಹದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭ ಸ್ಥಾಪಿಸುವ ಉದ್ದೇಶದಿಂದ ಫೆ.23 ರಂದು ಕೊಡಿಮರದ ವನದೇವತಾ ಪೂಜೆ ದಾನಿಗಳಾದ ಅಂಡಿಂಜೆ ಮುತ್ತಯ್ಯ ಪೂಜಾರಿ ಅವರ ಮನೆಯ ವಠಾರದಲ್ಲಿ ಅಳದಂಗಡಿ ಅರಮನೆಯ ಡಾl ಪದ್ಮಪ್ರಸಾದ ಅಜಿಲ ಅವರ ಉಪಸ್ಥಿತಿಯಲ್ಲಿ ನೆರವೇರಿತು.
ಈ ಸಂದರ್ಭ ಅಳದಂಗಡಿಯ ವೈದ್ಯ ಡಾl ಎಂ.ಎನ್.ತುಳಪುಳೆ, ಅಂಡಿಂಜೆ- ಕಿಲಾರ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ರಮೇಶ ಗೋರೆ, ಗ್ರಾ.ಪಂ.ಮಾಜಿ ಸದಸ್ಯ ಸತೀಶ ತಾಮನ್ಕಾರ್, ಅಳದಂಗಡಿ ಅರಮನೆ ಚಾವಡಿ ನಾಯಕ ರಾಜಶೇಖರ, ಸುರೇಂದ್ರ ಬಲ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಮರದ ದಾನಿ ಮುತ್ತಯ್ಯ ಪೂಜಾರಿ ಅವರನ್ನು ಗೌರವಿಸಲಾಯಿತು. ದೇವಳದ ತಂತ್ರಿಗಳಾದ ಸೀತಾರಾಮ ಕೇಳ್ಕರ್ ಕಾಜಿಮುಗೇರು ಅವರು ವನದೇವತಾ ಪ್ರಾರ್ಥನೆ ಪೂಜೆ ನೆರವೇರಿಸಿದರು. ಬಳಿಕ ಅಲ್ಲಿಂದ ಕೊಡಿಮರವನ್ನು ಲಾರಿ ಮೂಲಕ ಅಳದಂಗಡಿ- ಸೂಳಬೆಟ್ಟು ರಸ್ತೆಯ ಮೂಲಕ ವಾದ್ಯಘೋಷ ಸಹಿತ ಶೋಭಾಯಾತ್ರೆಯೊಂದಿಗೆ ಬರಯ ದೇವಸ್ಥಾನಕ್ಕೆ ತರಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾನಂದ ಸಹಸ್ರಬುದ್ಧೆ, ಸಹ ಮೊಕ್ತೇಸರರಾದ ಪ್ರಭಾಕರ ಆಠವಳೆ, ಪದ್ಮನಾಭ ನಾತು, ಗಜಾನನ ನಾತು, ದಯಾನಂದ ನಾತು, ಚಂದ್ರಕಾಂತ ಗೋರೆ, ಪುರುಷೋತ್ತಮ ತಾಮನ್ಕಾರ್, ಅರ್ಚಕ ಭಾರ್ಗವ ಮರಾಠೆ, ಸ್ಥಳೀಯರಾದ ಪದ್ಮನಾಭ ಜೋಶಿ, ಮುರಲೀಧರ ಗೋಖಲೆ, ಅಮರೇಶ ಜೋಶಿ, ಪ್ರವೀಣಚಂದ್ರ ಮೆಹೆಂದಳೆ, ಪ್ರಶಾಂತ ನಾತು, ಅಶೋಕ ಮೆಹೆಂದಳೆ ಫಂಡಿಜೆ, ಶಶಿ ಸಹಸ್ರಬುದ್ದೆ, ಕಾಜು, ಜಯರಾಮ ಹೆಗ್ಡೆ, ಹರೀಶ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.