ಬೆಳ್ತಂಗಡಿ: ಅಜಿಲಸೀಮೆಯ ಪ್ರಮುಖ ಗುತ್ತು ಬರ್ಕೆಯ ಮನೆತನವಾದ ಪಿಲ್ಯ ಗ್ರಾಮದ ಶೇಡಿ ಮನೆತನದ ಗುರಿಕ್ಕಾರರಾಗಿ ಸಂಜೀವ ಪೂಜಾರಿ ಹಾಗೂ ಯಮುನಾರವರ ಹಿರಿಯ ಪುತ್ರ,ಗುರಿಕ್ಕಾರರಾದ ಮಾಯಿಲ ಪೂಜಾರಿರವರ ಮೊಮ್ಮಗ ರಾಜೇಶ್ ಬುಣ್ಣಾನ್ ರವರಿಗೆ ಅಳದಂಗಡಿ ಅರಮನೆಯಲ್ಲಿ ಸಾಂಪ್ರದಾಯಿಕ ಪಟ್ಟಿಪ್ರಧಾನ ಮಾಡಲಾಯಿತು.
ತಿಮ್ಮಣ್ಣರಸರಾದ ಡಾ.ಪಧ್ಮಪ್ರಸಾದ ಅಜಿಲರವರ ದಿವ್ಯಹಸ್ತದಿಂದ ನೀಡಲಾದ ಗುರಿಕಾರಿಕೆಯ ಪಟ್ಟಿಪ್ರಧಾನದ ಸಂದರ್ಭದಲ್ಲಿ ಚಾವಡಿ ನಾಯಕರಾದ ರಾಜಶೇಖರ ಶೆಟ್ಟಿ, ಜಗದೀಶ್ ಹೆಗ್ಡೆ ನಾವರಗುತ್ತು, ಸುಭಾಶ್ಚಂದ್ರ ರೈ, ಸುರೇಂದ್ರ ಬಲ್ಯಾಯ,ಹಿರಿಯ ಗುರಿಕ್ಕಾರರಾದ ಕೊಡಿಬಾಳೆ ಕೊರಗಪ್ಪ ಪೂಜಾರಿ, ವಾಸು ಪೂಜಾರಿ ಮಂಜಿನಡ್ಕ, ಪ್ರಭಾಕರ ಕೊಡಂಗೆ, ವಿಜಯಕುಮಾರ್ ಕೆಮಣಬೈಲು,ಪಟ್ಟಿಪ್ರಧಾನ ಸ್ವೀಕರಿಸಿದ ರಾಜೇಶ್ ಬುಣ್ಣನ್ ರವರ ತಾಯಿ ಯಮುನಾ,ಪತ್ನಿ ಸೌಮ್ಯ,ಸಹೋದರರಾದ ನಾಗೇಶ್,ಉಮೇಶ್,ಸಹೋದರಿ ಶಕುಂತಲಾ,ಪ್ರಮುಖರಾದ ಲೋಕಯ್ಯ ಪೂಜಾರಿ,ನಾರಾಯಣ ಪೂಜಾರಿ,ದಯಾನಂದ ಪೂಜಾರಿ,ನೋಣಯ್ಯ ಪೂಜಾರಿ,ಸುಧೀರ್ ಪಟ್ಲ,ಊರ ಪ್ರಮುಖರಾದ ಗಂಗಾಧರ ಮಿತ್ತಮಾರು, ಪ್ರಶಾಂತ್ ಪಂಡಿತ್, ಬೇಬಿ ಪೂಜಾರಿ ಪುಣ್ಕೆತ್ಯಾರು,ಧರ್ಣಪ್ಪ ಪೂಜಾರಿ ದೋರಿಂಜ,ಗಿರೀಶ್ ಇಂಚರ,ಮುತ್ತ ಪೂಜಾರಿರವರ ಸಹಿತ ಪ್ರಮುಖರು ಉಪಸ್ಥಿತರಿದ್ದರು.