News Karnataka Kannada
Monday, May 06 2024
ಮಂಗಳೂರು

ವೀಕೆಂಡ್ ಕರ್ಫ್ಯೂ ಪ್ರಸ್ತಾಪ ದಲಿತ ವಿರೋಧಿ; ಸುನಿಲ್ ಕುಮಾರ್ ಬಜಾಲ್

Strike
Photo Credit :

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಮತ್ತೊಮ್ಮೆ ಅನಗತ್ಯವಾಗಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಹೇರಿಕೆಯ ಮೂಲಕ ಮುಂದುವರಿದ ಭಾಗವಾಗಿ ಲಾಕ್ ಡೌನ್ ಹೇರುವ ತಯಾರಿಯಲ್ಲಿದೆ. ಇದು ದಲಿತ ಮತ್ತು ಆದಿವಾಸಿ ವಿರೋಧಿ ಧೊರಣೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಕಟುವಾಗಿ ಟೀಕಿಸಿದರು.

ಅವರು ನಗರದಲ್ಲಿಂದು ಆದಿವಾಸಿ ಹಕ್ಕುಗಳ ಸಮಿತಿ ಹಾಗೂ ದಲಿತ ಹಕ್ಕುಗಳ ಸಮಿತಿಗಳ ಜಂಟಿ ನೇತ್ರತ್ವದಲ್ಲಿ ವೀಕೆಂಡ್ ಕರ್ಫ್ಯೂ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮುಂದುವರಿದು ಮಾತನಾಡಿದ ಅವರು,ಕಳೆದ ಎರಡೂ ವರ್ಷಗಳಲ್ಲಿ ವಿಧಿಸಿದ ಲಾಕ್ ಡೌನ್ ಕರ್ಫ್ಯೂಗಳಿಂದ ದೇಶದ ಕಾರ್ಪೋರೇಟ್ ರಂಗದ ಲಾಭಾಂಶ 35%ಕ್ಕೂ ಅಧಿಕವಾಗಿದೆ.ಇದಕ್ಕೆ ವ್ಯತಿರಿಕ್ತವಾಗಿ ಜನಸಮುದಾಯದ ಬದುಕು ಚಿಂತಾಜನಕವಾಗಿದ್ದು ಚೇತರಿಸಿಕೊಳ್ಳಲಾಗದೆ ಚಡಪಡಿಸುತ್ತಿದ್ದಾರೆ.ಮತ್ತೆ ಮೂರನೇ ಬಾರಿಗೆ ಲಾಕ್ ಡೌನ್ ಹೇರುವ ಮೂಲಕ ದುಡಿಯುವ ಶೋಷಿತ ವರ್ಗದ ಬದುಕನ್ನು ನುಚ್ವುನೂರು ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ, ಪ್ರಗತಿಪರ ಚಿಂತಕರೂ, ನಿವ್ರತ್ತ ಪ್ರಾಧ್ಯಾಪಕರಾದ ಪಟ್ಟಾಬಿರಾಮ ಸೊಮಯಾಜಿ, ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಯೋಗೀಶ್ ಜಪ್ಪಿನಮೊಗರುರವರು ಮಾತನಾಡಿ, ರಾಜ್ಯ ಸರಕಾರದ ಜನವಿರೋಧಿ ಕೃತ್ಯಗಳನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ DYFI ಜಿಲ್ಲಾ ನಾಯಕರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ನಿತಿನ್ ಬಂಗೇರ, JMS ಮುಖಂಡರಾದ ಭಾರತಿ ಬೋಳಾರ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜರವರು ಹಾಜರಿದ್ದರು.

ಪ್ರತಿಭಟನೆಯ ನೇತ್ರತ್ವವನ್ನು ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕ್ರಷ್ಣ ತಣ್ಷೀರುಬಾವಿ, ರಘುವೀರ್, ಸುಧಾಕರ್, ಚಂದ್ರಶೇಖರ, ಸುರೇಶ್ ಬಿಜೈ, ಪ್ರವೀಣ್ ಕೊಂಚಾಡಿ, ಮನೋಜ್ ಉರ್ವಾಸ್ಟೋರ್, ಆದಿವಾಸಿ ಹಕ್ಕುಗಳ ಸಮಿತಿ ನಾಯಕರಾದ ಶಶಿಕಲಾ ನಂತೂರು, ಕಿಶನ್, ವಸಂತಿ, ಅಶ್ವಿನಿ, ಮೊದಲಾದವರು ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು