News Karnataka Kannada
Thursday, May 02 2024
ಮಂಗಳೂರು

ಮಾ.19-20 ರಂದು ಉಜಿರೆಯಲ್ಲಿ ಅ.ಭಾ.ಸಾ.ಪ 3ನೇ ರಾಜ್ಯ ಮಟ್ಟದ ಅಧಿವೇಶನ

Manglore
Photo Credit :

ಉಜಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ 3 ನೇ ರಾಜ್ಯ ಮಟ್ಟದ ಅಧಿವೇಶನ ಮಾ. 19 ಮತ್ತು 20 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ “ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ” ಪರಿಕಲ್ಪನೆಯಲ್ಲಿ ನಡೆಯಲಿದ್ದು, ವಿವಿಧ ಸಮಿತಿ,ಉಪಸಮಿತಿಗಳ ನೇತೃತ್ವದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದ್ದು, ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಎಲ್ಲರಿಗು ಗೊತ್ತಿದ್ದು ,ಇಲ್ಲಿಯ ಅಚ್ಚುಕಟ್ಟುತನ ,ಸಂಘಟನಾ ಚತುರತೆ ,ಯಶಸ್ವಿಗೊಳಿಸುವ ಸಂಕಲ್ಪಶಕ್ತಿ ಯಿಂದ ಕಾರ್ಯಗಳು ಅಂತಿಮ ಹಂತ ತಲುಪಿದ್ದು ಸಂಘಟಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಎಲ್ಲರ ನಿರೀಕ್ಷೆ ,ಆತ್ಮವಿಶ್ವಾಸದಿಂದ ಉಜಿರೆಯ ಅಧಿವೇಶನ ಯಶಸ್ವಿಯಾಗಿ ನೆನಪಿನಲ್ಲಿ ಅಜರಾಮರವಾಗಿ ಉಳಿಯುವಂತಾಗಲಿ ಎಂದು ಅ .ಭಾ .ಸಾ .ಪ .ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಅವರು ಮಾ 13 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ಅ .ಭಾ .ಸಾ .ಪ .3 ನೇ ರಾಜ್ಯ ಮಟ್ಟದ ಅಧಿವೇಶನದ ಅಂತಿಮ ತಯಾರಿ ಬಗ್ಗೆ ನಡೆದ ವಿವಿಧ ಸಮಿತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಭೆಯಲ್ಲಿ ಅಧಿವೇಶನದ ಸ್ವಾಗತ ಸಮಿತಿ ,ಅತಿಥಿ ಸತ್ಕಾರ ಸಮಿತಿ ,ವಿವಿಧ ಗೋಷ್ಠಿಗಳು ,ನೋಂದಾವಣೆ ,ವಸ್ತು ಪ್ರದರ್ಶನ ,ಸ್ವಯಂ ಸೇವಕರು ,ವೇದಿಕೆ ನಿರ್ವಹಣೆ,ಆರ್ಥಿಕ ,ವಾಹನ ಪಾರ್ಕಿಂಗ್ , ಸಾಂಸ್ಕೃತಿಕ ಕಾರ್ಯಕ್ರಮ ,ಫೇಸ್ ಬುಕ್ ಲೈವ್ , ಮಾಧ್ಯಮ ಮೊದಲಾದ ವಿವಿಧ ವಿಭಾಗಗಳ ಪ್ರಗತಿ ಬಗೆಗೆ ವಿಭಾಗ ಪ್ರಮುಖರು ಮಾಹಿತಿ ನೀಡಿ ಅಧಿವೇಶನ ಸಂಚಾಲಕ ನಾರಾಯಣ ಶೇವಿರೆ ಅವರು ಸೂಕ್ತ ಸಲಹೆ ,ಸೂಚನೆ ನೀಡಿ ಗುಣಮಟ್ಟದ ದೃಷ್ಟಿಯಲ್ಲಿ ಅಧೀವೇಶನ ಪೂರ್ಣ ಯಶಸ್ವಿಯಾಗುವಂತೆ ಮಾರ್ಗದರ್ಶನ ನೀಡಿದರು .

ಅ.ಭಾ.ಸಾ.ಪ. ರಾಜ್ಯ ಉಪಾಧ್ಯಕ್ಷ ರಘುನಂದನ ಭಟ್, ಉಜಿರೆಯ ವಿನಯಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ ಕ.ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ|ಶ್ರೀಧರ ಭಟ್ , ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರಕಾಶ ನಾರಾಯಣ , ರಾಜ್ಯ ಕಾರ್ಯದರ್ಶಿ ಡಾ|ಮಾಧವ ಎಂ .ಕೆ ,ತಾಲೂಕು ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಕಾರ್ಯದರ್ಶಿ ರಮೇಶ್ ಮಯ್ಯ ಉಪಸ್ಥಿತರಿದ್ದರು. ಡಾ| ರವಿ ಎಂ. ಎನ್ . ಸ್ವಾಗತಿಸಿ, ವಂದಿಸಿದರು. ಕೇಶವ ಭಟ್ ಅತ್ತಾಜೆ, ಲಕ್ಸ್ಮಿನಾರಾಯಣ, ಭಾಸ್ಕರ ಹೆಗ್ಡೆ, ವಿದ್ಯಾ ಅಡೂರು, ಸುನಿಲ್ ಪಂಡಿತ್ , ನವೀನ ನೆರಿಯ, ನಾರಾಯಣ ಫಡಕೆ, ವನಿತಾ ಶೆಟ್ಟಿ, ಕೃಷ್ಣ ಶೆಟ್ಟಿ , ಸೀತಾರಾಮ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು