News Karnataka Kannada
Saturday, May 04 2024
ಮಂಗಳೂರು

ರೌಡಿಶೀಟರ್ ಇಲ್ಯಾಸ್ ಹತ್ಯೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Crime
Photo Credit : News Kannada

ಉಳ್ಳಾಲ : ರೌಡಿಶೀಟರ್ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 4ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (28) ಎಂಬಾತನನ್ನು ಉಳ್ಳಾಲ ಪೊಲೀಸರ ತಂಡ ಮೇ 4ರಂದು  ಬಂಧಿಸಿದೆ.

ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್‌ ಇಲ್ಯಾಸ್‌ನನ್ನು 2018ರ ಜ. 13 ರಂದು ಜೆಪ್ಪು ಕುಡಾ³ಡಿಯಲ್ಲಿ ಆತನ ಫ್ಲಾಟ್‌ನಲ್ಲೇ ಹತ್ಯೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಮೂವರು ಆರೋಪಿಗಳಾದ ದಾವುದ್‌, ರಿಯಾಝ್, ನಾಸಿರ್‌ನನ್ನು ಅಂದೇ ಬಂಧಿಸಿದ್ದು, ಸಮೀರ್‌ ತಲೆಮರೆಸಿಕೊಂಡಿದ್ದನು.

ಕಳೆದ ಎರಡು ತಿಂಗಳ ಹಿಂದೆ ಉಳ್ಳಾಲ ಉರೂಸ್‌ ಸಂದರ್ಭ ಆತನನ್ನು ಉಳ್ಳಾಲ ಪೊಲೀಸರು ಹಿಡಿಯಲು ಯತ್ನಿಸಿದ್ದರೂ ಕಾರ್ಯಾಚರಣೆ ಸಫಲವಾಗಿರಲಿಲ್ಲ.

ಇದೀಗ ಆರೋಪಿ ಪಂಪ್‌ವೆಲ್‌ ಮುಖೇನ ಬೆಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ಸಂದೀಪ್‌ ಅವರ ನಿರ್ದೇಶನದಂತೆ ಎಸ್‌ಐ ಪ್ರದೀಪ್‌ ಹಾಗೂ ಸಿಬಂದಿ ರಂಜಿತ್‌, ಚಿದಾನಂದ್‌ ಹಾಗೂ ಸತೀಶ್‌ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು