ಬೆಳ್ತಂಗಡಿ: ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ರಾಜೀವ್ ಗಾಂಧಿ ಆರೋಗ್ಯವಿಜ್ಞಾನ ವಿ.ವಿ.ಆಶ್ರಯದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾವನದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದ ಪುರುಷರ ವಿಭಾಗದಲ್ಲಿ ಮಂಗಳೂರು ಎ.ಜೆ. ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಮಹಿಳಾ ವಿಭಾಗದಲ್ಲಿ ಹಾಸನ ವೈದ್ಯಕೀಯ ಶಿಕ್ಷಣ ಸಂಸ್ಥೆ (ಎಚ್.ಐ.ಎಂ.ಎಸ್.) ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.
ಪಂದ್ಯಾಟದಲ್ಲಿ ಒಟ್ಟು ೭೩ ಪುರುಷರ ತಂಡಗಳು ಹಾಗೂ ೨೩ ಮಹಿಳಾ ತಂಡಗಳು ಸೇರಿದಂತೆ ಒಟ್ಟು ೯೬ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಫೈನಲ್ ಪಂದ್ಯಾಟದಲ್ಲಿ ಮಂಗಳೂರು ಎ.ಜೆ. ವೈದ್ಯಕೀಯ ಕಾಲೇಜು ತಂಡವು ಆದಿತ್ಯ ಇ. ಆ.ಫಿ. ಮತ್ತು ರಿ.ಸೆಂಟರ್ ತಂಡದೊಂದಿಗೆ ಸೆಣೆಸಾಡಿ ೩೭-೨೨ ಅಂಕದಿಂದ ಎ.ಜೆ. ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.
ಮಹಿಳಾ ವಿಭಾಗದ ಫೈನಲ್ ಪಂದ್ಯದ ಕಾದಾಟದಲ್ಲಿ ಹಾಸನ್ ಮೆಡಿಕಲ್ ಕಾಲೇಜು ತಂಡ ಎಸ್.ಡಿ.ಎಂ. ತಂಡವನ್ನು ೨೬-೨೦ ಅಂಕದೊಂದಿಗೆ ಪರಾಭಾವಗೊಳಿಸಿ ಹಾಸನ ತಂಡವು ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತೆಲಂಗಾಣ ಉಚ್ಚ ನ್ಯಾಯಾಲಯ ನ್ಯಾಯಾಧೀಶರಾದ ಪಿ.ಮಾಧವಿ ದೇವಿ, ಮಂಗಳೂರು ಎ.ಜೆ. ಮೆಡಿಕಲ್ ಕಾಲೇಜಿನ ಡೀನ್ ಅಶೋಕ್ ಹೆಗ್ಡೆ, ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪ ಕಾರ್ಯದರ್ಶಿ ಡಾ| ಎಸ್.ಸತೀಶ್ವಂದ್ರ, ರಾಜೀವ ಗಾಂಧಿ ವಿಶ್ವವಿದ್ಯಾಲಯದ ಪ್ರತಿನಿಧಿ ಡಾ| ಸುರೇಶ್, ಎಸ್.ಡಿ.ಎಂ. ಉಜಿರೆ ಸಿ.ಎನ್.ವೈ.ಎಸ್ .ಪ್ರಾಂಚಾರ್ಯ ಡಾ| ಪ್ರಶಾಂತ್ ಶೆಟ್ಟಿ, ಡೀನ್ ಡಾ| ಶಿವಪ್ರಸಾದ್ ಶೆಟ್ಟಿ, ದೈಹಿಕ ನಿರ್ದೇಶಕ ಧರ್ಮೇಂದ್ರ ಕುಮಾರ್ ಉಪಸ್ಥಿತರಿದ್ದರು.