ಬೆಳ್ತಂಗಡಿ : ಶಿವ ಜ್ಯೋತಿ ಯೋಗಕೇಂದ್ರ ಬೆಂಗಳೂರು, ಇವರು ನಡೆಸಿದ ಯೋಗೋತ್ಸವ 2022 ಆನ್ಲೈನ್ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಕಲ್ಮಂಜದ ಅಕ್ಷಯನಗರ ಶೈನ್ ಆನ್ ಯೋಗ ಇದರ ಮೂರು ಮಂದಿ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿವೇಕಾನಂದ ವಿದ್ಯಾವರ್ಧಕ ಪ್ರೌಢ ಶಾಲೆ ಮುಂಡಾಜೆ ಇಲ್ಲಿನ10 ನೇ ತರಗತಿ ವಿದ್ಯಾರ್ಥಿನಿ ಪೃಥ್ವಿ, ದ.ಕ.ಜಿ.ಪಂ ಹಿ ಪ್ರಾ ಶಾಲೆ ಕಲ್ಮಂಜ ಇಲ್ಲಿನ 7 ನೇ ತರಗತಿ ವಿದ್ಯಾರ್ಥಿ ರಕ್ಷಾ, ಮತ್ತು ವಿವೇಕಾನಂದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇಲ್ಲಿನ 6 ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ಇವರು ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು. ಇವರಿಗೆ ಯೋಗ ಶಿಕ್ಷಕ, ಉಜಿರೆ ಎಸ್ಡಿಎಂ ಈಜು ಕೊಳದ ತರಬೇತುದಾರ ಶೀನ ಇವರು ತರಬೇತಿ ನೀಡಿರುತ್ತಾರೆ.