News Karnataka Kannada
Saturday, April 27 2024
ಮಂಗಳೂರು

ಮೆಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮದೇವಸ್ಥಾನದ ದೃಢಕಲಶಾಭಿಷೇಕ ಕಾರ್ಯಕ್ರಮ

Badinade
Photo Credit :

ಬೆಳ್ತಂಗಡಿ: ದೇವಸ್ಥಾನದ ಜೀಣೋದ್ಧಾರ ಬ್ರಹ್ಮಕಲಶ ಕಾರ್ಯವು ಗ್ರಾಮಸ್ಥರ ಮತ್ತು ಊರ ಪರವೂರ ದಾನಿಗಳ ನೆರವಿನಿಂದ ನಡೆಯುತ್ತದೆ. ಬ್ರಹ್ಮಕಲಶೋತ್ಸವದ ನಂತರ ದೇವಸ್ಥಾನದ ಸಾನಿಧ್ಯ ವೃದ್ಧಿಯಾಗಲು ಗ್ರಾಮಸ್ಥರು ನಿತ್ಯ ದೇವಸ್ಥಾನಕ್ಕೆ ಹೋಗುವ ಸಂಕಲ್ಪ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ಅವರು ಭಾನುವಾರ ಮೆಲಂತಬೆಟ್ಟು ಬದಿನಡೆ ಇದರ ಶ್ರೀ ನಾಗಬ್ರಹ್ಮದೇವಸ್ಥಾನದ ದೃಢಕಲಶಾಭಿಷೇಕ ಕಾರ್ಯಕ್ರಮದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದವರನ್ನು ಅಭಿನಂದಿಸಿ ಮಾತನಾಡಿ ಬದಿನಡೆ ದೇವಸ್ಥಾನದಲ್ಲಿ ದೇವ ಇಚ್ಚೆಯಂತೆ ದೇವಸ್ಥಾನ ಸಂಪೂರ್ಣ ಜೀಣೋದ್ಧಾರಗೊಂಡಿದೆ.

ಅಲ್ಲದೆ ಮುಖಮಂಟಪ, ಅನ್ನಛತ್ರ ಸಹಿತ ಇತರ ಜೀಣೋದ್ಧಾರ ಕಾರ್ಯಗಳು ಪೂರ್ಣ ಪ್ರಮಾಣದಲ್ಲಿ ನಡೆದಿದೆ. ಇದಕ್ಕೆಲ್ಲ ಗ್ರಾಮಸ್ಥರ ಸಂಪೂರ್ಣ ಕೊಡುಗೆ ಇದೆ. ಇಲ್ಲಿನ ದೇವರ ಶಕ್ತಿ ಅಪಾರವಾಗಿದ್ದು ಪರವೂರಿನ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಪರವೂರಿನ ಭಕ್ತಾಧಿಗಳಿಗಿಂದ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿನಿತ್ಯ ದೇವಸ್ಥಾನಕ್ಕೆ ಬರುವ ಸಂಕಲ್ಪವನ್ನು ಮಾಡಬೇಕು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ ಮಾತನಾಡಿ ಬದಿನಡೆ ಬ್ರಹ್ಮಕಲಶೋತ್ಸವವು ಒಂದು ಮಾದರಿ ಬ್ರಹ್ಮಕಲಶೋತ್ಸವವಾಗಿ ನಡೆದಿದ್ದು ಇದಕ್ಕೆ ಇಲ್ಲಿನ ದೇವರ ಅನುಗ್ರಹ ಮತ್ತು ಗ್ರಾಮಸ್ಥರ, ಭಕ್ತಾಧಿಗಳ ಸಹಕಾರ ಕಾರಣವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕೂಡ ಈ ಭಾಗದ ಜನರ ನಂಬಿಕೆ, ವಿಶ್ವಾಸವನ್ನು ನೋಡಿ ಅತೀ ಹೆಚ್ಚಿನ ರೀತಿಯಲ್ಲಿ ನೆರವನ್ನು ನೀಡಿದ್ದಾರೆ.

ಅಲ್ಲದೆ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್ ಮತ್ತು ಪ್ರತಾಪ್‌ಸಿಂಹ ನಾಯಕ್‌ರವರು ಕೂಡ ಕೊಡುಗೆಯನ್ನು ನೀಡಿದ್ದಾರೆ. ಹೆಚ್ಚಿನ ಭಕ್ತಾಧಿಗಳು ನೆರವನ್ನು ನೀಡಿರುವುದು ಇಲ್ಲಿನ ದೇವರ ಕಾರ್ಣಿಕ ಎನ್ನಬಹುದು. ಎಲ್ಲಾ ಸಮಿತಿಯ ಪದಾಧಿಕಾರಿಗಳ ಸೇವೆ ಮರೆಯಲು ಅಸಾಧ್ಯ ಎಂದರು.

ಗೋಪಾಲಕೃಷ್ಣ ತಂತ್ರಿಗಳು ಭಕ್ತರ ಸೇವೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಾ| ಶೈಲೇಶ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುರ್ತೋಡಿ, ಸಾರಿಗ ಇಲಾಖಾಧಿಕಾರಿ ಚರಣ್, ಮೆಲಂತಬೆಟ್ಟು ಗ್ರಾ.ಪಂ ಅಧ್ಯಕ್ಷೆ ಹರಿಣಾಕ್ಷಿ ಉಪಸ್ಥಿತರಿದ್ದರು.

ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ ಸ್ವಾಗತಿಸಿ ರಾಜೇಂದ್ರ ನಾಯಕ್ ವಂದಿಸಿದರು. ಸುಧಾ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು.

ಕ್ಷೇತ್ರದಲ್ಲಿ ಗಣಹೋಮ, ಪ್ರಧಾನ ಹೋಮ, ಕಲಶ ಪೂಜೆ, ನಾಗಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ನಾಗನಕಟ್ಟೆಯಲ್ಲಿ ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ಮತ್ತು ಮಹಾಪೂಜೆ ನಡೆಯಿತು. ರಾತ್ರಿ ರಂಗಪೂಜೆ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು