ಬೆಳ್ತಂಗಡಿ: ಚಿತ್ಪಾವನ ಸಂಘಟನೆ ಮುಂಡಾಜೆ ಇದರ ವತಿಯಿಂದ ಸ್ನೇಹ ಮಿಲನ 2022 ಕಾರ್ಯಕ್ರಮ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಸಂಘಟನೆಯ ಅಧ್ಯಕ್ಷ ವಾಸುದೇವ ಗೋಖಲೆ ಅಧ್ಯಕ್ಷತೆ ವಹಿಸಿದ್ದರು. ಶಿಶಿಲ ಚಿತ್ಪಾವನ ಸಂಘದ ಅಧ್ಯಕ್ಷ ವರದ ಶಂಕರ ದಾಮ್ಲೆ ಕಾರ್ಯಕ್ರಮ ಉದ್ಘಾಟಿಸಿದರು.
ಪುರೋಹಿತ ಕರುಣಾಕರ ಅಭ್ಯಂಕರ್, ಕಾರ್ಯದರ್ಶಿ ಶಶಿಧರ ಠೋಸರ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್ ಸ್ವಾಗತಿಸಿದರು ಸುಷ್ಮಾ ಎಸ್.ಭಿಡೆ ವಂದಿಸಿದರು.ಚಿತ್ರಾ ಭಿಡೆ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ
ವೇದಮೂರ್ತಿ ಗೋವಿಂದ ಮರಾಠೆ, ಸಮಾಜಸೇವಕರ ಶರಶ್ಚಂದ್ರ ಖಾಡಿಲ್ಕರ್, ಬಾಣಸಿಗ ಗುರುಪ್ರಸಾದ್ ಮೆಸ್ಕಾರ್, ಭರತನಾಟ್ಯದಲ್ಲಿ ಉನ್ನತ ಶ್ರೇಣಿ ಪಡೆದ ಧರಿತ್ರಿ ಭಿಡೆ, ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ರಮಾ ಪಟವರ್ಧನ್, ಶಿವಪ್ರಸಾದ ಮರಾಠೆ, ಶ್ರೀನಿವಾಸ ಕಾಕತ್ಕರ್ ಹಾಗೂ ಪತ್ರಕರ್ತ ಅರವಿಂದ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ದೂರವಾಣಿ ಕೈಪಿಡಿ,ಪತ್ರಿಕೆ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.