News Karnataka Kannada
Monday, April 29 2024
ಮಂಗಳೂರು

ಮಳಲಿ ಮಸೀದಿ ಹಿಂದೂಗಳ ಪ್ರದೇಶ, ನಮಗೆ ಬಿಟ್ಟುಕೊಡಿ: ಶರಣ್ ಪಂಪ್ ವೆಲ್

Untitled 1
Photo Credit :

ಮಂಗಳೂರು: ಮಳಲಿಯಲ್ಲಿನ ಮಸೀದಿ ಇರುವ ಪ್ರದೇಶವು ಹಿಂದೂಗಳದ್ದು ಎಂದು, ಇಂದು ಇರಿಸಿರುವ ಪ್ರಶ್ನಾಚಿಂತನೆಯಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ. ಆದ್ದರಿಂದ ಈ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಿ ಎಂದು ಮಸೀದಿಯ ಆಡಳಿತ ಕಮಿಟಿಗೆ ಒತ್ತಾಯ ಹಾಗೂ ಮನವಿಯನ್ನು ಮಾಡುತ್ತಿದ್ದೇನೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.

ತಾಂಬೂಲ ಪ್ರಶ್ನಾಚಿಂತನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಳಲಿ ಮಸೀದಿ ಇದ್ದ ಪ್ರದೇಶ ಹಿಂದೂಗಳ ಸ್ಥಳ ಅದನ್ನು ಬಿಟ್ಟು ಕೊಡಬೇಕೆಂದು ಹೋರಾಟ ಮನವಿಯನ್ನು ಮಾಡಿದ್ದೇವು. ಆದ್ದರಿಂದ ಅಲ್ಲಿ ದೇವತಾ ಸಾನಿಧ್ಯವಿತ್ತೇ, ಯಾವ ದೇವರ ಆರಾಧನೆ ನಡೆಯುತ್ತಿತ್ತು ಎಂಬ ಉದ್ದೇಶದಿಂದ ಇಂದು ತಾಂಬೂಲ ಪ್ರಶ್ನೆ ಇಡಲಾಗಿತ್ತು. ಇದೀಗ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಅವರು ಇಟ್ಟಿರುವ ತಾಂಬೂಲ ಪ್ರಶ್ನೆಯಲ್ಲಿ ದೇವತಾ ಸಾನಿಧ್ಯ ಇತ್ತು ಎಂಬ ಸ್ಪಷ್ಟತೆ ಗೋಚರವಾಗಿದೆ. ಮಸೀದಿ ಇದ್ದ ಪ್ರದೇಶದಲ್ಲಿ ಹಿಂದೆ ಶೈವ ಆರಾಧನೆ ನಡೆಯುತ್ತಿತ್ತು ಎಂಬ ಸತ್ಯಾಸತ್ಯತೆ ದೊರಕಿದೆ ಎಂದರು.

ಈ ಹಿನ್ನೆಲೆಯಲ್ಲಿ ಮಸೀದಿ ಇರುವ ಜಾಗವನ್ನು ಹಿಂದೂಗಳದ್ದು, ಹಿಂದೂಗಳಿಗೆ ಬಿಟ್ಟುಕೊಡಿ ಎಂದು ಮಸೀದಿಯ ಆಡಳಿತ ಕಮಿಟಿಗೆ ಒತ್ತಾಯ ಹಾಗೂ ಮನವಿಯನ್ನು ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಗೂ ಸೂಕ್ತ ದಾಖಲೆಗಳನ್ನು ನಾವು ನೀಡುತ್ತೇವೆ‌. ಆ ಮೂಲಕ ತಮಗೆ ನ್ಯಾಯ ಸಿಗುವ ಭರವಸೆ ನೀಡುತ್ತೇವೆ ಎಂದು ಶರಣ್ ಪಂಪ್ ವೆಲ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು