ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು 17 ನೇ ಶತಮಾನದ ಕವಿ-ಸಂತ ಸಂತ ತುಕಾರಾಂ ಮಹಾರಾಜ್ ಅವರ ನಿವಾಸವಾದ ಪುಣೆಯ ದೇಹುಗೆ ಭೇಟಿ ನೀಡಲಿದ್ದು, ಅಲ್ಲಿ ಮೋದಿ ವಾರಕರಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಹುಗೆ ಭೇಟಿ ನೀಡುವ ಆಹ್ವಾನವನ್ನು ಪ್ರಧಾನಿ ಸ್ವೀಕರಿಸಿದ್ದಾರೆ ಮತ್ತು ಅದರಂತೆ ಜೂನ್ 14 ರಂದು ಬರಲಿದ್ದಾರೆ ಎಂದು ಮಹಾರಾಷ್ಟ್ರ-ಬಿಜೆಪಿ ಆಧ್ಯಾತ್ಮಿಕ ಸಮನ್ವಯ ಸಮಿತಿಯ ಅಧ್ಯಕ್ಷ ಆಚಾರ್ಯ ತುಷಾರ್ ಭೋಸ್ಲೆ ಹೇಳಿದ್ದಾರೆ.
ಒಂದೆರಡು ತಿಂಗಳ ಹಿಂದೆ, ವಾರಕರಿ ಸಮುದಾಯದ ನಿಯೋಗವು ನವದೆಹಲಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ದೇಹುಗೆ ಭೇಟಿ ನೀಡುವಂತೆ ಮೋದಿಯವರನ್ನು ಆಹ್ವಾನಿಸಿತ್ತು ಎನ್ನಲಾಗುತ್ತಿದೆ.
ಸಂತ ತುಕಾರಾಂ ದೇವಾಲಯವು ಇಂದ್ರಾಯಣಿ ನದಿಯ ದಡದಲ್ಲಿದೆ. ದೇಹುವಿನಿಂದ ತುಕಾರಾಂ ಮಹಾರಾಜರ ಪಾಲ್ಕಿ, ಆಳಂದಿಯಿಂದ ಸಂತ ಜ್ಞಾನೇಶ್ವರನ ಪಾಲ್ಕಿ ಮತ್ತು ಹಲವಾರು ಇತರ ಸಂತರ ಪಾಲ್ಕಿ (ಪಲ್ಲಕ್ಕಿ) ವಾರ್ಷಿಕವಾಗಿ 21 ದಿನಗಳ ಪ್ರಯಾಣದ ನಂತರ ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದ ದೇವಸ್ಥಾನಕ್ಕೆ ಆಷಾಧಿ ಏಕಾದಶಿಯಂದು ಭೇಟಿ ನೀಡುತ್ತಾರೆ.
ಭಗವಾನ್ ವಿಠ್ಠಲ್ ಭಗವಾನ್ ಕೃಷ್ಣನ ಅವತಾರವಾಗಿದ್ದು, ಮರಾಠಿ ಸಂಸ್ಕೃತಿಯಲ್ಲಿ ಜನಪ್ರಿಯ ದೇವತೆಯಾಗಿದೆ.