News Karnataka Kannada
Tuesday, April 30 2024
ಮಂಗಳೂರು

ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಮೇಳ ರಚನೆ

Local News
Photo Credit :

ಬೆಳ್ತಂಗಡಿ :ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಯಕ್ಷಗಾನ‌ ಮೇಳವನ್ನು ರಚನೆ ಮಾಡಲಾಗಿದೆ. ಇದರ ತಿರುಗಾಟವು ಡಿ. 18 ರಿಂದ ಪ್ರಾರಂಭವಾಗಲಿದೆ ಎಂದು ಮೇಳದ ವ್ಯವಸ್ಥಾಪಕ, ರಾಘವೇಂದ್ರ ಅಸ್ರಣ್ಣ ಎಂ. ಹೇಳಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿ ಕರೆದು ತಿರುಗಾಟದ ವಿವರಗಳನ್ನು ನೀಡಿದರು. ​

ಪುರಾಣ ಪ್ರಸಿದ್ಧವಾದ ಕಣ್ವ ಋಷಿ ಪ್ರತಿಷ್ಠಾಪಿತ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೆಜ್ಜೆಕಟ್ಟುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದು ಬಂದಿದ್ದು ಯಕ್ಷಗಾನ ಎನ್ನುವ ಬೆಳಕಿನ ಸೇವೆ ದೇವಿಗೆ ಪ್ರಿಯವಾದುದು. ನಾಳ ಕ್ಷೇತ್ರದಲ್ಲಿ ಯಕ್ಷಗಾನ ಸಂಘಗಳ ಮೂಲಕ ಬಯಲಾಟ ತಾಳಮದ್ದಲೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು ಅದಕ್ಕಾಗಿ ಕ್ಷೇತ್ರ ವ್ಯವಸ್ಥಾಪನಾ ಸಮಿತಿಯ ಒಮ್ಮತ ಅಭಿಪ್ರಾಯದಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಿರ್ವಾದದೊಂದಿಗೆ ಡಿ.೧೮ರಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ತಿರುಗಾಟ ಪ್ರಾರಂಭವಾಗಲಿದೆ ದೇವಳದ ಅರ್ಚಕರೂ ಆಗಿರುವ ಅಸ್ರಣ್ಣರು ತಿಳಿಸಿದರು.

ಈ ಮೇಳವು ಬಯಲಾಟ ಮೇಳವಾಗಿದ್ದು ಎಲ್ಲಾ ಪೌರಾಣಿಕ ಪ್ರಸಂಗಗಳನ್ನು, ಐತಿಹಾಸಿಕ ಪ್ರಸಂಗಗಳನ್ನು ಹಾಗೂ ಕಾಲ್ಪನಿಕ ಪ್ರಸಂಗಗಳನ್ನು ಆಡಿ ತೊರಿಸಲಿದೆ. ಹಿತ ಮಿತವಾದ ವೀಳ್ಯದ ಜೊತೆಗೆ ಉತ್ತಮ ಪ್ರದರ್ಶನ ನೀಡಲು ಬದ್ಧರಿದ್ದಾರೆ. ಅನುಭವಿ ಕಲಾವಿದರು ಮೇಳದಲ್ಲಿದ್ದು ಸ್ಥಳೀಯ ಕಲಾವಿದರು ಕೂಡ ಮೇಳದಲ್ಲಿದ್ದಾರೆ ಎಂದರು.

ಈ ವರ್ಷ ಕ್ಷೇತ್ರದ ಪುಣ್ಯ ಕಥಾನಕ ನಾಳಕ್ಷೇತ್ರ ಮಹಾತ್ಮೆ, ಮಾಯಕೊದ ಸತ್ಯ ಕಲ್ಲುರ್ಟಿ, ಯಶಸ್ವಿ ಪ್ರಸಂಗ ತಿರುಮಲೆತ ತೀರ್ಥ, ಸಾಂಸಾರಿಕ ಕಥಾನಕ ದೈವ ಸಂಕಲ್ಪ ಹಾಗೂ ಕಲಾಪ್ರೇಮಿಗಳು ಇಷ್ಟ ಪಡುವ ಎಲ್ಲಾ ರೀತಿಯ ಪುರಾಣ ಐತಿಹಾಸಿಕ ಯಕ್ಷಗಾನ ಪ್ರಸಂಗಗಳು ಕಾಲಮಿತಿಯಲ್ಲಿ‌ ಹಾಗೂ ಸಂಪೂರ್ಣ ರಾತ್ರಿ ಪ್ರದರ್ಶನಗೊಳ್ಳಲಿದೆ ಎಂದರು.

ಭಾಗವತರಾಗಿ ಮೋಹನ ಕಲಂಬಾಡಿ, ಸ್ವರ ಸಿಂಧೂರಿ ಅಮೃತ ಅಡಿಗ, ನಿರಂಜನ ಬೆಳ್ಳೂರು, ಚೆಂಡೆ ಮದ್ದಳೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಚಂದ್ರಶೇಖರ ಭಟ್ ಕೊಂಕಣಾಜೆ, ನವೀನಚಂದ್ರ ಮೊಗರ್ನಾಡು, ಸಂಗೀತದಲ್ಲಿಮುರಾರಿ ಪಂಜಿಗದ್ದೆ, ಹಾಸ್ಯದಲ್ಲಿ ರಘುನಾಥ ರೈ ಅಂಕತಡ್ಕ, ರವಿಭಂಡಾರಿ ಪೆರ್ಣ, ಸ್ತ್ರೀ  ಪಾತ್ರದಲ್ಲಿ ಸೀತರಾಮ ಕಜೆಕೋಡಿ, ರವಿಚಂದ್ರ ಚೆಂಬು, ಸೂರ್ಯ ಶೆಟ್ಟಿ ಮಲ್ನಾಡ್, ಕಲಾವಿದರಾಗಿ ಪುಷ್ಪರಾಜ ಜೋಗಿ, ರಾಘವ ಹೆಚ್ ಗೇರುಕಟ್ಟೆ, ರಾಘವೇಂದ್ರ ಕಾರ್ಕಳ, ದಿನೇಶ್ ಬಂಟ್ವಾಳ, ರಾಘವೇಂದ್ರ ಅಸ್ರಣ್ಣ, ಶೇಖರ ಮಣಿಯಾಣಿ ಸುಳ್ಯ, ಮೋಹನ ಕವತ್ತಾರು, ಪ್ರದೀಪ್ ಬೆಳ್ಳಾರೆ, ಗೋಪಾಲ ರೈ ಬೆಳ್ಳಾರೆ, ಉಮೇಶ ವಳಕಡಮ, ಜಗದೀಶ ಸರಪಾಡಿ, ಕೃಷ್ಣಾನಂದ ಕುಡ್ವ, ಅತಿಥಿ ಕಲಾವಿದರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಸತೀಶ್ ಪುಣಿಚಿತ್ತಾಯ, ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಶಾಸಕ ಹರೀಶ್ ಪೂಂಜಾ ಆ ದಿನ ಶ್ರೀಕ್ಷೇತ್ರದಲ್ಲಿ ನಡೆಯುವ ಬಯಲಾಟ ಸೇವೆಯನ್ನು ನಡೆಸಿ ಅದೇ ದಿನ ಗೆಜ್ಜೆ ಮಹೂರ್ತದ ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಶಿಧರ ಶೆಟ್ಟಿ ಬರೋಡ, ವೇ| ಮೂ| ರಾಮದಾಸ ಅಸ್ರಣ್ಣ ಮಾರೂರು ಖಂಡಿಗ, ಕೃಷ್ಣ ಸೋಮಯಾಜಿ ಸುಳ್ಯ, ಸುಭಾಷಿಣಿ ಜನಾರ್ಧನ ಗೌಡ, ಪಟ್ಲ ಸತೀಶ್ ಶೆಟ್ಟಿ, ವಸಂತ ಮಜಲು, ಹೇಮಂತ್ ಕುಮಾರ್ ಮೈಸೂರು, ಶಿವಶಂಕರ್ ನಾಯಕ್, ದೇವರಾಜ ಶೆಟ್ಟಿ, ಜನಾರ್ಧನ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಪ್ರಬಂಧಕರಾದ ರಾಘವ್ ಹೆಚ್. ಗೇರುಕಟ್ಟೆ, ಶ್ರೀಕ್ಷೇತ್ರ ನಾಳಸ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ, ಮೋಹನ ಕಲಂಬಾಡಿ, ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು