ಕರ್ನಾಟಕವು ಆಧ್ಯಾತ್ಮಿಕತೆಯ ನಾಡು. ಇಲ್ಲಿ ನಾವು ಅನೇಕ ಧಾರ್ಮಿಕ ಕೇಂದ್ರಗಳನ್ನು ಕಾಣುತ್ತೇವೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯು ಅನೇಕ ಪ್ರಾಚೀನ ಮತ್ತು ಅನನ್ಯ ದೇವಾಲಯಗಳನ್ನು ಹೊಂದಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳು ಕೇವಲ ತನ್ನ ಸಮುದ್ರ ಸೌಂದರ್ಯಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ ಸಾಕಷ್ಟು ದೇವಲಯಗಳಿಗೂ ಪ್ರಸಿದ್ಧವಾಗಿದೆ.
ಕರಾವಳಿ ಪ್ರದೇಶದಲ್ಲಿರುವ ಹೆಚ್ಚಿನ ದೇವಾಲಯಗಳು ಶತಮಾನಗಳ ಪರಂಪರೆಯನ್ನು ಹೊಂದಿವೆ. ಈ ಎಲ್ಲಾ ದೇವಾಲಯಗಳು ಭಕ್ತರಿಂದ ಕಿಕ್ಕಿರಿದು ತುಂಬಿರುತ್ತವೆ. ಧರ್ಮಸ್ಥಳವು ದೇಶದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ಸುಂದರವಾದ ಪ್ರಕೃತಿಯಿಂದ ಆವೃತವಾಗಿದೆ.
ಧರ್ಮಸ್ಥಳ ದೇವಾಲಯವು ಸುಮಾರು ಎಂಟು ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ದೇವಾಲಯವಾಗಿದೆ. ಇದು ಶಿವನಿಗೆ ಅಂದರೆ ಮಂಜುನಾಥ ಸ್ವಾಮಿಗೆ ಸಮರ್ಪಿತವಾಗಿದೆ ಮತ್ತು ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿದೆ. ಹೆಸರೇ ಸೂಚಿಸುವಂತೆ, ಧರ್ಮಸ್ಥಳವು ಧರ್ಮ ಮತ್ತು ಪವಿತ್ರತೆಯ ಭೂಮಿಯಾಗಿದೆ. ಇಲ್ಲಿ ದರೋಡೆ, ಸುಳ್ಳು ಹೇಳುವುದು ಮತ್ತು ಇತರರನ್ನು ಮೋಸಗೊಳಿಸುವಂತಹ ತಪ್ಪು ಕೆಲಸಗಳನ್ನು ಯಾರೂ ಮಾಡುವ0ತಿಲ್ಲ ಎಂದು ಭಾವಿಸಲಾಗಿದೆ. ಅಲ್ಲದೆ, ಯಾರಾದರೂ ಹಾಗೆ ಮಾಡಿದರೆ, ಮಂಜುನಾಥ ಸ್ವಾಮಿಯ ಅವರನ್ನು ಶಿಕ್ಷಿಸುತ್ತಾನೆ ಎಂಬ ಪ್ರತೀತಿ ಇದೆ .
ಧರ್ಮಸ್ಥಳ ಮಂಜುನಾಥ ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದರೂ, ಪ್ರಕೃತಿಯಲ್ಲಿ ಬಹಳ ವಿಶಿಷ್ಟವಾಗಿದೆ. ಧರ್ಮ ದೈವಗಳು ಮತ್ತು ಶಕ್ತಿ ಅಥವಾ ಅಮ್ಮಾನವರ ಇತರ ವಿಗ್ರಹಗಳು ಮತ್ತು ಕಲರ್ಕೈ, ಕನ್ಯಾಕುಮಾರಿ, ಕಾಳರಾಹು ಮತ್ತು ಕುಮಾರಸ್ವಾಮಿಯಂತಹ ಭಗವಾನ್ ಧರ್ಮದ ನಾಲ್ಕು ರಕ್ಷಕ ದೈವಗಳಿವೆ.
ಇತಿಹಾಸದ ಪ್ರಕಾರ, ಈ ಪ್ರದೇಶವು ಬೆಳ್ತಂಗಡಿಯ ಕುಡುಮ ಎಂಬ ಹಳ್ಳಿಯಲ್ಲಿ ಇತ್ತು. ಪ್ರಸಿದ್ಧ ಜೈನ ಬಂಟ ಮುಖ್ಯಸ್ಥ ಬೀರ್ಮಣ್ಣ ಪೆರ್ಗಡೆ ಅವರು ತಮ್ಮ ಪತ್ನಿ ಅಮ್ಮು ಬಲ್ಲಾಳ್ತಿ ಅವರೊಂದಿಗೆ ನೆಲ್ಯಾಡಿ ಬೀಡುವಿನ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಒಂದು ದಿನ, ಧರ್ಮದ ನಾಲ್ವರು ರಕ್ಷಕ ದೂತರು ತಮ್ಮನ್ನು ತಾವು ಮನುಷ್ಯರಂತೆ ಮರೆಮಾಚಿಕೊಂಡು ಬೀರ್ಮಣ್ಣ ಅವರ ಮನೆಯನ್ನು ಪ್ರವೇಶಿಸಿದರು. ಅವರು ಧರ್ಮದ ಬೋಧನೆ ಮತ್ತು ಪ್ರಚಾರದ ಕಾರ್ಯದಲ್ಲಿದ್ದರು ಮತ್ತು ಅದಕ್ಕೆ ಪ್ರತಿಯಾಗಿ ಬಹಳ ಆತ್ಮೀಯ ಸ್ವಾಗತವನ್ನು ಪಡೆದರು. ಅವರು ಬೀರ್ಮಣ್ಣ ಅವರಿಗೆ ಮನೆಯನ್ನು ಖಾಲಿ ಮಾಡುವಂತೆ ವಿನಂತಿಸಿದರು, ಅವರು ಅದನ್ನು ಒಪ್ಪಿಕೊಂಡರು. ಅಂತಿಮವಾಗಿ, ಅವರು ನಾಲ್ಕು ದೈವಗಳಿಗೂ ಪ್ರತ್ಯೇಕ ದೇವಾಲಯಗಳನ್ನು ನಿರ್ಮಿಸಿದರು. ಕನಸಿನಲ್ಲಿ ನಡೆದ ಈ ಮಾತಿನಂತೆ
ಪೆರ್ಗಡೆಯವರು ದೇವಾಲಯಗಳನ್ನು ನಿರ್ಮಿಸಿದರು. ನಂತರ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಬ್ರಾಹ್ಮಣ ಪುರೋಹಿತರನ್ನು ಆಹ್ವಾನಿಸಲಾಯಿತು, ನಂತರ ಅವರು ದೈವಗಳ ಪಕ್ಕದಲ್ಲಿಯೇ ಶಿವಲಿಂಗವನ್ನು ನಿರ್ಮಿಸುವಂತೆ ಪೆರ್ಗಡೆಯವರಿಗೆ ಹೇಳಿದರು. ಈ ದೇವಾಲಯವನ್ನು ನಂತರ ಈ ರಚನೆಗಳ ಸುತ್ತಲೂ ನಿರ್ಮಿಸಲಾಯಿತು.
ದೇವಾಲಯದ ನಿರ್ಮಾತೃಗಳಾದ ಬೀರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಈ ದೇವಾಲಯದ ಆನುವಂಶಿಕ ಟ್ರಸ್ಟಿಗಳು. ಪ್ರತಿಯೊಬ್ಬ ಸದಸ್ಯನಿಗೂ ವಿಭಿನ್ನ ಸ್ಥಾನಗಳು ಅಥವಾ ಪದನಾಮಗಳನ್ನು ನಿಯೋಜಿಸಲಾಗುತ್ತದೆ. ಹಿರಿಯ ಸದಸ್ಯನು ಮುಖ್ಯ ಆಡಳಿತಗಾರ ಅಥವಾ ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ, ಅವರು ಹೆಗ್ಗಡೆ ಎಂಬ ಬಿರುದನ್ನು ಗಳಿಸುತ್ತಾನೆ. ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ಸುತ್ತ ಸುತ್ತುವ ವಿವಾದಗಳನ್ನು ಪರಿಹರಿಸುವ ಕರ್ತವ್ಯಗಳನ್ನು ಅವರಿಗೆ ವಹಿಸಲಾಗಿದೆ. ಧರ್ಮಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಪ್ರಸ್ತುತ ಮುಖ್ಯ ಆಡಳಿತಾಧಿಕಾರಿಯಾಗಿದ್ದಾರೆ.
ದೇವಾಲಯಕ್ಕೆ ಸಂಬಂಧಿಸಿದ ಭಾವನೆಗಳಿಗೆ ಗೌರವ ಸಲ್ಲಿಸಲು ಭಕ್ತರು ಕೆಲವು ನಿಯಮಗಳಿಗೆ ಅನುಗುಣವಾಗಿರಬೇಕು ಎಂದು ನಿರೀಕ್ಷಿಸಲಾಗಿದೆ. ಪುರುಷರು ತಮ್ಮ ಪಾಶ್ಚಾತ್ಯ ದಿರಿಸುಗಳನ್ನು ತೆಗೆದುಹಾಕಿ ಭಾರತೀಯ ಸಂಪ್ರಯಕ್ಕೆ ಅನುಗುಣವಾಗಿ ಪಂಚೆಯನ್ನು ಧರಿಸಬೇಕು. ನೈಟಿ ಧರಿಸಿ ಮಹಿಳೆಯರು ದೇವಾಲಯವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಗರ್ಭಗುಡಿಯನ್ನು ಪ್ರವೇಶಿಸುವಂತಿಲ್ಲ. ಅನೇಕ ಭಕ್ತರು ಇಲ್ಲಿನ ದೇವಾಲಯದ ಪ್ರಸಾದ ಅಥವಾ ಊಟವನ್ನು ಇಷ್ಟಪಡುತ್ತಾರೆ.
ಮಂಜೂಷ ವಸ್ತುಸಂಗ್ರಹಾಲಯವು ದೇವಾಲಯಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಶ್ರೀ ವೀರೇಂದ್ರ ಹೆಗ್ಗಡೆಯವರ ಸಂಗ್ರಹದ ರಕ್ಷಾಕವಚಗಳು, ಖಡ್ಗಗಳು, ಹಳೆಯ ಕ್ಯಾಮೆರಾಗಳು ಹಾಗೂ ವಿಂಟೇಜ್ ಕಾರುಗಳ ಭಂಡಾರವಾಗಿದೆ.
ಕಟೀಲು, ಮೂಡಬಿದಿರೆ, ಉಡುಪಿ, ಮಂಗಳೂರು ಮತ್ತು ಸುಬ್ರಹ್ಮಣ್ಯ ಹತ್ತಿರದ ತಾಣವಾಗಿದ್ದು, ಧರ್ಮಸ್ಥಳ ಭೇಟಿಯ ಸಮಯದಲ್ಲಿ ಈ ಪ್ರದೇಶಗಳಿಗೂ ಸಹ ಭೇಟಿ ನೀಡಬಹುದಾಗಿದೆ. ಸೆಪ್ಟೆಂಬರ್ ನಿಂದ ಫೆಬ್ರವರಿ ತಿಂಗಳು ಧರ್ಮಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
Photo Source: Wikimedia Commons