ಬೆಳ್ತಂಗಡಿ: ಉಜಿರೆಯ ಮುಖ್ಯ ಪೇಟೆಯಲ್ಲಿರುವ ಮೊಬೈಲ್ ಅಂಗಡಿ ಸಹಿತ ಪೇಪರ್ ಸ್ಟಾಲ್ ಒಂದಕ್ಕೆ ಗುರುವಾರ ಮಧ್ಯರಾತ್ರಿ ಹೆಂಚು ತೆಗೆದು ಕಳ್ಳರು ಒಳಪ್ರವೇಶಿಸಿದ್ದಾರೆ.
ಉಜಿರೆ ಪೇಟೆಯಲ್ಲಿರುವ ರಾಜು ಮೊಬೈಲ್ ಶಾಪ್ನಿಂದ ರಿಪೇರಿಗೆ ನೀಡಿದ ಮೊಬೈಲ್ ಸಹಿತ ಕೆಲ ಹೊಸ ಮೊಬಲ್ಗಳನ್ನು ಕಳವು ಮಾಡಲಾಗಿದೆ.
ಕೇಸರ್ ಎಂಟರ್ ಪ್ರೈಸಸ್ನಿಂದ ಐದು ಸಾವಿರ ರೂ. ಸೇರಿದಂತೆ ದುರ್ಗಾ ಮೊಬೈಲ್ ಅಂಗಡಿ, ಪ್ರಜ್ವಲ್ ಅವರ ಮನೆಗೆ ಪ್ರವೇಶಿಸಲು ಯತ್ನಿಸಿದ್ದು, ವಿಶ್ವನಾಥ್ ಬಂಡಾರಿ ಅವರಲ್ಲೂ ಕಳವಿಗೆ ಪಯ್ರತ್ನ ನಡೆಸಲಾಗಿದೆ.
ಹೆಂಚು ತೆರವುಗೊಳಿಸಿ ಅಂಗಡಿಯೊಳಗೆ ಪ್ರವೇಶಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.