ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿದ್ದ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಕೆಡವಲು ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ ಈ ಹಿನ್ನೆಲೆಯಲ್ಲಿ ಹಳೆಯ ಮಾರ್ಕೆಟ್ ನ ಬಾಕಿ ಇರುವ ಕಟ್ಟಡವನ್ನು ಕೆಡವುವ ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿದ್ದು ದಿನಪೂರ್ತಿ ಕಾರ್ಯಚರಣೆ ನಡೆಯಿತು ,ಸಂಪೂರ್ಣ ಕಟ್ಟಡ ತೆರವು ಮಾಡಿ ಕಾಮಗಾರಿ ಪೂರ್ಣಗೊಂಡಿದೆ . ಕಾರ್ಯಾಚರಣೆ ಮಾಡಿದ ಸಂಸ್ಥೆ ಕಟ್ಟಡ ತ್ಯಾಜ್ಯವನ್ನು ನಿರ್ವಹಣೆ ಮಾಡಲಿದೆ
ನಗರದ ಅಧಿಕ ವಾಹನ ಜನದಟ್ಟಣೆ ಇರುವ ಸ್ಥಳಗಳಲ್ಲಿ ಕಟ್ಟಡ ತೆರವು ಕಟ್ಟಡ ತ್ಯಾಜ್ಯ ತೆರವು ಮಾಡುವ ಕಾರಣದಿಂದ ಮಾರ್ಕೆಟ್ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಂಡಿವೆ ಮುಂದಿನ ನಾಲ್ಕೈದು ದಿನವೂ ಇಂತಹ ಪರಿಸ್ಥಿತಿ ಇರಲಿದೆ.
ದ್ವಿಚಕ್ರ ವಾಹನದವರು ಪಾದಚಾರಿಗಳು ಸ್ಥಳಮಾಡಿಕೊಂಡು ಮಾರ್ಕೆಟ್ ವ್ಯಾಪ್ತಿಯಲ್ಲಿ ತೆರಳುವಂತಾಯಿತು ಬೀದಿಬದಿ ವ್ಯಾಪಾರಕ್ಕೆ ಮಾತ್ರ ಯಾವುದೇ ಸಮಸ್ಯೆ ಇರಲಿಲ್ಲ. ಸೆಂಟ್ರಲ್ ಮಾರ್ಕೆಟ್ ಕಟ್ಟಡಕ್ಕೆ ತರಕಾರಿ ಹಣ್ಣುಹಂಪಲು ಮತ್ತು ಮೀನು ಮಾಂಸದ ಮಾರ್ಕೆಟ್ ನ 2ಕಟ್ಟಡಗಳು ಸುಮಾರು ಅರವತ್ತ್ 2ವರ್ಷಗಳ ಇತಿಹಾಸವಿದೆ.
ಹಳೆಯದಾದ ಈ ಕಟ್ಟಡ ಶಿಥಿಲವಾಗಿದ್ದು ಇಲ್ಲಿರುವ ಮೀನು ಮಾಂಸದ ಮಾರ್ಕೆಟ್ ಕಟ್ಟಡದ ಕೆಲವು ಭಾಗಗಳು ಕೆಲವು ವರ್ಷಗಳ ಹಿಂದೆಯೇ ಕುಸಿದಿದ್ದು ಬಳಿಕ ಅದಕ್ಕೆ ತೇಪೆ ಹಚ್ಚಲಾಗಿತ್ತು . ಬಳಿಕ ಮಾರುಕಟ್ಟೆಯನ್ನು ಆಧುನೀಕರಿಸಬೇಕು ಸಾಗಿ ಬಂದಿರುವ ಕಾರಣ ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನ ಮಾರ್ಕೆಟ್ ಕಟ್ಟಡ ಕಟ್ಟಿಸಲು 2ಸಾವಿರದ ಹದಿನಾರು ಜೂನ್ ಇಪ್ಪತ್ತ್ 9ರಂದು ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಬಳಿಕ ಸ್ಮಾರ್ಟ್ ಸಿಟಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು 2ಸಾವಿರದ ಹದಿನೆಂಟರ ಸೆಪ್ಟೆಂಬರ್ ಇಪ್ಪತ್ತ ಎರಡ ರಂದು ನಡೆದ ಉನ್ನತಾಧಿಕಾರಿ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ ಮಂಜೂರಾತಿ ನೀಡಲಾಗಿತ್ತು ಬಳಿಕ ಟೆಂಡರ್ ಪ್ರಕ್ರಿಯೆ ಮುಗಿದು ಪಿಪಿಪಿ ಪಾಲುದಾರಿಕೆಯನ್ನು ಅಂತಿಮಗೊಳಿಸಿದೆ.
ಈ ಮಧ್ಯೆ ಕೋರೋಣ ತೀವ್ರವಾದಾಗ 2ಸಾವಿರದ ಇಪ್ಪತ್ತ ರ ಏ 2ರಂದು ಕಟ್ಟಡ ನಿರ್ಮಾಣಕ್ಕೆ ಇದು ಸೂಕ್ತ ಸಮಯ ಎಂದು ಮಾರ್ಕೆಟ್ ನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಿಷೇಧಿಸಿ ಶಿಥಿಲವಾದ ಹಳೆಯ ಕಟ್ಟಡವನ್ನು ಕೆಡಹಲು ನಿರ್ಧರಿಸಿ ಏಪ್ರಿಲ್ ನಾಲ್ಕರಂದು ಸಾರ್ವತ್ರಿಕ ಒಡೆಸಿತ್ತು ಕೆಡವುವ ಕಾಮಗಾರಿಯನ್ನು ಆರಂಭಿಸಲಾಗಿತ್ತು . ಇದನ್ನು ಆಪೇಕ್ಷಿಸಿ ಕೆಲವು ಮಂದಿ ವ್ಯಾಪಾರಿಗಳು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ ಇಪ್ಪತ್ತೊಂಬತ್ತರಂದು ಕಾಮಗಾರಿ ನಿಲ್ಲಿಸಲಾಗಿತು ಇದೀಗ ನ್ಯಾಯಾಲಯದ ತಡೆಯಾಜ್ಞೆ ತೆರವು ಮಾಡಿದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.