ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾಕೇಂದ್ರ , ಜಲ್ಲಿಗುಡ್ಡೆ ಇದರ ವಿಂಶತಿ ವರ್ಷಾಚರಣೆಯ ಸರಣಿ ಕಾರ್ಯಕ್ರಮ ಇಪ್ಪತ್ತೆರಡರನ್ವಯ ಸಂತ ಜೋಸೆಫರ ಪ್ರೌಢ ಶಾಲೆ, ಬಜಾಲ್ ನಲ್ಲಿ ವನಮಹೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ತಾರಸಿ ಕೃಷಿ ಪ್ರಾತ್ಯಕ್ಷಿಕೆ ಹಾಗೂ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜು. 8ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಕೃಷ್ಣಪ್ಪ ಪಡ್ಡಂಬೈಲ್ ಮಕ್ಕಳಿಗೆ ತಾರಸಿಯಲ್ಲಿ ಕೃಷಿ ಮಾಡುವ ವಿಧಾನವನ್ನು ವಿವರಿಸಿ ಮಾಹಿತಿ ನೀಡಿದರು. ಈ ಸಂಧರ್ಭ ಕಲಾಕೇಂದ್ರದ ವತಿಯಿಂದ ಪಡ್ಡಂಬೈಲ್ ಅವರನ್ನು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಬಿ.ಪ್ರಕಾಶ್ ಪೈ. ಯವರು ಫಲಕ ಕಾಣಿಕೆ ಇತ್ತು ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು ಮನೆಯಲ್ಲಿಯೇ ತರಕಾರಿ ಬೆಳೆಸಿ ಆರೋಗ್ಯ ಕರ ಜೀವನ ನಿಮ್ಮದಾಗಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಭಾಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಅಧ್ಯಕ್ಷ ಕೆ.ಸಿ. ಹರಿಶ್ಚಂದ್ರ ರಾವ್ ವಹಿಸಿದ್ದರು ಅತಿಥಿಗಳಾಗಿ ಆತ್ಮಶಕ್ತಿ ಸಹಕಾರ ಸಂಘದ ಅದ್ಯಕ್ಷ ರಾದ ಚಿತ್ತರಂಜನ್ ಬೋಳಾರ್, ನಹರು ಯುವಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ., ಲಯನ್ಸ್ ಕೇಂದ್ರ ಸಂಘದ ಅಧ್ಯಕ್ಷ ರಾದ ಎಸ್. ಎಸ್. ಪೂಜಾರಿ , ಮುಖ್ಯೋಪಾಧ್ಯಾಯರಾದ ಲವಿಟಾ , ಶಾಲಾ ವ್ಯವಸ್ಥಾಪಕಿ ಭಗಿನಿ ಶೈಲಾ, ರಾಜೇಶ್ ವಿಕ್ಟರ್, ಶ್ರೀಮತಿ ಮಂಗಳಾ ನಂದ , ಶ್ರೀಮತಿ ದಿನಮಣಿ ಹಾಗೂ ಸಂಸ್ಥೆಯ ಗಂಗಾಧರ್ ರಾವ್, ಗಣೇಶ್ ಕೊಟ್ಟಾರಿ, ವಿದ್ಯಾ ಕೆ.,ಹಾಗೂ ಅಶೋಕ್ ಜಾದವ್ ಉಪಸ್ಥಿತರಿದ್ದರು.
ಟೀಚರ್ ಉಷಾ ಸ್ವಾಗತಿಸಿ, ಶೋಭಾ ಹರೀಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂತೊಇಷ್ ಪಡೀಲ್ ಅಭಿನಂದನಾ ಭಾಷಣ ಮಾಡಿದರು. ಪ್ರತೀ ತರಗತಿ ನಾಯಕರುಗಳಿಗೆ ಸಸಿ ವಿತರಿಸಲಾಯಿತು. ಮಕ್ಜಳಿಂದ ಪರಿಸರ ನೃತ್ಯ, ಪರಿಸರ ಗೀತೆ ಹಾಗೂ ಪರಿಸರ ಭಾಷಣ ವ್ಯಯಏರ್ಪಡಿಸಲಾಗಿತ್ತು. ಆನಂದ ರಾವ್ ಕಾರ್ಯಕ್ರಮ ನಿರೂಪಿಸಿ ಸುಮಲತಾ ಧನ್ಯವಾದವಿತ್ತರು.