News Karnataka Kannada
Saturday, May 04 2024
ಮಂಗಳೂರು

ಭಗವಾನ್ ೧೦೦೮ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣದ ಸಂಭ್ರಮಾಚರಣೆ

Mahaveera
Photo Credit :

ಬೆಳ್ತಂಗಡಿ: ಭಗವಾನ್ ಮಹಾವೀರರ ತತ್ವದಲ್ಲಿ ಜಗತ್ತು ಬೆಳೆಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಯಾವುದಾದರು ದೇಶ ಸ್ವತಂತ್ರಗೊಳ್ಳಲು ಮೊದಲ ಮನಸ್ಸಿಗೆ ಬರುವ ಹಾದಿ ಕ್ರಾಂತಿ. ಆದರೆ ಜಗತ್ತಿನಲ್ಲಿ ಒಂದೇ ಒಂದು ರಾಷ್ಟ್ರ ‘. ಮಹಾವೀರರ ಅಹಿಂಸಾ ವಿಚಾರ‘ರೆಯಡಿ ಮಹಾತ್ಮಾಗಾಂಧಿಯವರು ಸ್ವಾತಂತ್ರ್ಯ ದೊರೆಕಿಸಿಕೊಟ್ಟಿದ್ದಿದ್ದರೆ ಅದು ಭಾರತಕ್ಕೆ ಮಾತ್ರ ಎಂದು ಶಾಸಕ ಹರೀಶ್ ಪೂಂಜ ಸ್ಮರಿಸಿದರು.

ಭಗವಾನ್ ೧೦೦೮ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣದ ಪ್ರಯುಕ್ತ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಎ.೧೯ರಂದು ಹಮ್ಮಿಕೊಂಡ ಸಂಭ್ರಮಾ ಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಹಿಂಸಾ ತತ್ವದಿಂದ ಜೀವನದ ಪರಿವರ್ತನೆ ಜತೆಗೆ ಜಗತ್ತನ್ನೆ ಗೆಲ್ಲಬಹುದು ಎಂಬುದನ್ನು ಮಹಾವೀರರು ತೋರಿಸಿಕೊಟ್ಟಿದ್ದಾರೆ. ಹಿಂದೆ ಇದ್ದ ಆಹಾರ ಪದ್ಧತಿ ತ್ಯಜಿಸಿ ಇಂದು ಆರೋಗ್ಯ ಪೂರ್ಣ ಸಮಾಜಕ್ಕೆ ಮಹಾವೀರರು ತೋರಿಸಿಕೊಟ್ಟ ಸಸ್ಯಹಾರ ಪದ್ಧತಿ ನೆಚ್ಚಿಕೊಂಡಿದೆ. ಜೈನ ಪರಂಪರೆಯಲ್ಲಿ ಒಬ್ಬ ವ್ಯಕ್ತಿ ಹೇಗೆ ಪರಿಪೂರ್ಣನಾಗಿ ಜೀವನವನ್ನು ನಡೆಸಬೇಕೆಂಬುದನ್ನು ತೋರಿಸಿಕೊಟ್ಟಂತೆ ಜಗತ್ತು ಮುನ್ನಡೆಯುತ್ತಿರುವುದರಿಂದ ಈ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂಬ ನೆಲೆಯಲ್ಲಿ ಸರಕಾರವೂ ಮಹಾವೀರ ಜಯಂತಿಯ್ನನು ಅಧಿಕೃತಗೊಳಿಸಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದೀಗ ಯುಗಳ ಮುನಿಗಳ ಪಾದಸ್ಪರ್ಶವಾಗಿದೆ. ಧರ್ಮ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಯುಗಳ ಮುನಿಗಳಿಂದಾಗುತ್ತಿದೆ. ಬಹುಷ ಯುಗಳ ಮುನಿಗಳು ಪ್ರಸಕ್ತ ಕಾಲಘಟ್ಟದ ಕಣ್ಣಿಗೆ ಕಾಣುವ ತೀರ್ಥಂಕರರಾಗಿರಬಹುದು ಎಂದು ಹೇಳಿದರು.

ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿ ಧಾರ್ಮಿಕ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಆತ್ಮ ಮತ್ತು ಕರ್ಮಸಿದ್ಧಾಂತದ ವಿಚಾರವಾಗಿ ಜಗತ್ತಿಗೆ ಮಾರ್ಗದರ್ಶನ ನೀಡಿದ ಧರ್ಮ ಜೈನ ಧರ್ಮ. ಮನುಷ್ಯ ಮಾತ್ರವಲ್ಲದೆ ಪ್ರಕೃತಿಯ ಮೇಲಿನ ಸಕಲ ಜೀವರಾಶಿಗಳಿಗೂ ತತ್ವಾದರ್ಶದ ಮೂಲಕ ಸಂದೇಶ ನೀಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ರಾಜಾಶ್ರಿಯಗಳು ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ನಮ್ಮ ಕಲ್ಯಾಣ ಸ್ವತಹಃ ನಾವೇ ಸಾಧಿಸಬೇಕೆಂದರು.

ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಪುಷ್ಪರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಹಾವೀರರ ಸಂದೇಶ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯ, ಈ ಮೂಲಕ ಶ್ರೇಷ್ಠ ತತ್ವಗಳು, ಧರ್ಮದ ಶ್ರೇಷ್ಠತೆ ಪ್ರಸಾರವಾಗಬೇಕು ಎಂದು ಹೇಳಿದರು.

ಬಂಗಾಡಿ ಅರಮನೆಯ ಅರಸರಾದ ಯಶೋಧರ್ ಬಳ್ಳಾಲ್, ಜೈನ್ ಮಿಲನ್ ವಲಯ ನಿರ್ದೇಶಕರಾದ ಜಯರಾಜ್ ಕಂಬಳಿ, ಅಂಡಾರು ಮಹಾವೀರ ಹೆಗ್ಗಡೆ, ಬಿ.ಸೋಮಶೇಖರ ಶೆಟ್ಟಿ, ವೇಣೂರು ಜೈನ್ ತೀರ್ಥ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ ಉಪಸ್ಥಿತರಿದ್ದರು.

ಧರ್ಮಸ್ಥಳದ ಡಾ| ಕೆ.ಜಯಕೀರ್ತಿ ಜೈನ್ ಸ್ವಾಗತಿಸಿದರು. ಶಿಕ್ಷಕ ಕೆ.ಧರಣೇಂದ್ರ ಜೈನ್ ವಂದಿಸಿದರು. ಮಿತ್ರಸೇನ ಜೈನ್ ಶಾಂತಿ ಮಂತ್ರ ಬೋಧಿಸಿದರು. ನಿಮಿತ್ ಜೈನ್ ಪ್ರಾರ್ಥಿಸಿದರು. ಅನನ್ಯಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

ವೇಣೂರು ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ
ಬೆಳ್ತಂಗಡಿ ತಾಲೂಕಿನಲ್ಲಿ ಮುಂದಿನ ವರ್ಷಗಳಿಂದ ಶಾಸಕನಾಗಿ ಇರುವರೆಗೆ ಮಹಾವೀರ ಜಯಂತಿಯನ್ನು ದೊಡ್ಡ ಪ್ರಮಾಣದಲ್ಲಿ ಅರ್ಥಪೂರ್ಣವಾಗಿ ನಿರಂತರವಾಗಿ ಆಚರಿಸಲಾಗುವುದು. ಮುಂದಿನ ವರ್ಷ ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ ಕಾಲಘಟ್ಟದಲ್ಲಿದ್ದೇವೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅಜಿಲ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಈ ವರ್ಷದಿಂದಲೇ ಪೂರ್ವತಯಾರಿ ನಡೆಸಲಿದ್ದೇವೆ. ತಾಲೂಕಿನಲ್ಲಿ ಜೈನ ಸಮುದಾಯ ಭವನ ನಿರ್ಮಾಣಕ್ಕೆ ೫೦ ಲಕ್ಷ ರೂ. ಮೀಸಲಿರಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು