ಮಂಗಳೂರು: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮಂಗಳೂರಿನ ಚಾರಿಟಬಲ್ ಟ್ರಸ್ಟ್ ‘ಪ್ರೀತಿ ಕಿರಣ್ ಫೌಂಡೇಶನ್’ ಅತ್ತಾವರ ಕೆಎಂಸಿ ಆಸ್ಪತ್ರೆ ಎದುರುಗಡೆ ಇರುವ ಆಟೋ ಮತ್ತು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಕೊಡುಗೆಯಾಗಿ ನೀಡಿದೆ. ನೂತನ ಘಟಕವನ್ನು ಸ್ಥಳೀಯ ಆಟೋ ಚಾಲಕರ ಮೂವರು ಮಕ್ಕಳು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ 2021 ರ ನವೆಂಬರ್ 5 ನೇ ಶುಕ್ರವಾರದಂದು ಉದ್ಘಾಟಿಸಿದರು. ಸ್ಥಳೀಯ ಕಾರ್ಪೊರೇಟರ್ ಶ್ರೀ ಶೈಲೇಶ್ ಶೆಟ್ಟಿ, ಅತ್ತಾವರ ಆಟೋ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಮೋಹನ್ ಮತ್ತು ಆಟೋ ಚಾಲಕರು ಉಪಸ್ಥಿತರಿದ್ದರು. ಆಟೋ ಸಂಘದ ಅಧ್ಯಕ್ಷರು ಟ್ರಸ್ಟ್ಗೆ ಧನ್ಯವಾದ ಅರ್ಪಿಸಿ, ನೀರಿನ ಯಂತ್ರದ ನಿರ್ವಹಣೆಯನ್ನು ಆಟೋ ಸಂಘದ ವತಿಯಿಂದ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜನರು ಮನಸುಮಾಡಿದಲ್ಲಿ ಸಮಾಜ ಸಾಕಷ್ಟು ಸುಧಾರಿಸಬಹುದು ಎಂದು ಟ್ರಸ್ಟ್ ನಂಬುತ್ತದೆ ಮತ್ತು ಸಮಾಜದ ಉನ್ನತಿಗಾಗಿ ಅನೇಕ ಸಣ್ಣ ಯೋಜನೆಗಳನ್ನು ರೂಪಿಸಿದೆ.
ಪ್ರೀತಿ ಕಿರಣ್ ಪ್ರತಿಷ್ಠಾನದಿಂದ ಅತ್ತಾವರ ಆಟೋ ಮತ್ತು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರ ಸ್ಥಾಪನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.