ದಿನಾಂಕ 28/10/2021 ರಂದು ಮಕ್ಕಳ ದಂತ ಚಿಕಿತ್ಸಾಲಯದ ಉದ್ಘಾಟನೆಯು ಸ್ಯಯದ್ ಮದನಿ ಉರ್ದು ಶಾಲೆ ಹಳೆಕೋಟೆಯಲ್ಲಿ ನಡೆಯಿತು. ದಂತ ಚಿಕಿತ್ಸಾಲಯದ ಉದ್ಘಾಟನೆಯನ್ನು ಜನಬ್ ಅಲ್ ಅಜಿ ಅಬ್ದುಲ್ ರಷೀದ್, ಆಧ್ಯಕ್ಷರು, ಉಳ್ಳಾಲ ಜುಮಾ ಮಸೀದಿ ಇವರು ನೆರವೇರಿಸಿದರು. ಜನಬ್ ಮೊಹಮ್ಮದ್ ತ್ವಹ , ಅಧ್ಯಕ್ಷರು, ಅಲ್ ಕರೀಂ ಮಸೀದಿ,ಹಳೆಕೋಟೆ, ಮೊಹಮ್ಮದ್ ಇಸ್ಮಯಿಲ್ ಹಾಜಬ್ಬ, ಸಂಚಾಲಕರು, ಸ್ಯಯದ್ ಮದನಿ ಶಿಕ್ಷಣ ಸಂಸ್ಥೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಕ್ಕಳ ದಂತ ವಿಭಾಗ, ಯೆನೆಪೋಯ ದಂತ ಕಾಲೇಜಿನ ಮುಖ್ಯಸ್ಥರಾದ ಡಾ. ಶರಣ್ ಎಸ್ ಸಾರ್ಗೊಡ್ ರವರು ದಂತ ಕ್ಲಿನಿಕ್ ನ ಉದ್ದೇಶ, ಕಾರ್ಯವೈಖರಿಯ ಬಗ್ಗೆ ವಿವರಿಸಿದರು. ಡಾ. ಅಖ್ತರ್ ಹುಸ್ಸೆನ್, ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಶುಭವನ್ನು ಕೋರಿ, ಯೆನೆಪೋಯ ಕಾಲೇಜಿನ ಚಟುವಟಿಕೆಗಳ ಪರಿಚಯವನ್ನು ನೀಡಿದರು. ಡಾ. ಶ್ಯಾಮ್ ಎಸ್. ಭಟ್, ಉಪ ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು ಪ್ರಾಸ್ತಾವಿಕ ಮಾತುಗಳನ್ನಾಡಿ ಶುಭ ಹಾರೈಸಿದರು. ಕೆ.ಮ್.ಕೆ. ಮಂಜನಾಡಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಶಕೀಲಾ, ಉಪಾದ್ಯಾಯರು ನಿರೂಪಿಸಿದರು. ಶ್ರೀಯುತ ಭರತ್, ದಂತ ವಿಭಾಗದ ಸಂಯೋಜಕರು ವಂದಿಸಿದರು.
ಮಕ್ಕಳ ದಂತ ಚಿಕಿತ್ಸಾಲಯದ ಉದ್ಘಾಟನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.