ಮಂಗಳೂರು : ಹೆಚ್ಚುತ್ತಿರುವ ಪ್ರಕರಣ ಮತ್ತು ಕೋವಿಡ್ ರೂಪಾಂತರ ಓಮೈಕ್ರೊನ್ ವೈರಸ್ ಹರಡುವಿಕೆ ಮಧ್ಯೆಯೇ ಪಿಯುಸಿ ಪರೀಕ್ಷೆ ನಡೆಸುವುದನ್ನು ಖಂಡಿಸಿ ಮತ್ತು ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಳ್ಯಾ ಮಾತನಾಡಿ ರಾಜ್ಯ ಸರಕಾರವು ಮೂರನೇ ಅಲೆಯ ಭೀತಿ ಹುಟ್ಟಿಸಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಚೆಲ್ಲಾಟವಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹೆತ್ತವರು ಆತಂಕಕ್ಕೀಡಾಗಿದ್ದಾರೆ.
ಹದಿನೆಂಟು ವರ್ಷದೊಳಗಿನ ಯಾರಿಗೂ ಇನ್ನೂ ಕೋವಿಡ್ ಲಸಿಕೆ ನೀಡಿಲ್ಲ. ಲಸಿಕೆ ನೀಡಿದವರ ಮಾಹಿತಿಯನ್ನು ಕೂಡ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೂಲಕವೇ ಪಡೆಯುವ ತಂತ್ರಗಾರಿಕೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆಪಾದಿಸಿದರು.
ವಿದ್ಯಾರ್ಥಿಗಳ ಬಗ್ಗೆ ಸರಕಾರಕ್ಕೆ ಕಿಂಚಿತ್ತು ಕಾಳಜಿಯಿಲ್ಲ ಎಂಬುದಕ್ಕೆ ಕರೋನ ಸಂಕಷ್ಟ ಕಾಲದಲ್ಲಿ ದ್ವಿತೀಯ ಪಿಯು ಅರ್ಧವಾರ್ಷಿಕ ಪರೀಕ್ಷೆ ನಡೆಸುವುದೇ ಸಾಕ್ಷಿಯಾಗಿದೆ. ಸರಕಾರ ತಕ್ಷಣ ಈ ಪರೀಕ್ಷೆಯನ್ನು ಮುಂದೂಡಿ ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಬೇಕೆಂದು ಜೊಲ್ಲೆ ಹೇಳಿದರು