ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಸಭಾಂಗಣದ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತದಾನವಿರುವುದರಿಂದ ದಿ: 10/12/2021 ರಂದು ಒಂದು ದಿನ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ನಾಳೆಯಂದು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯದಿರುವ ಕಾರಣ ಸಾರ್ವಜನಕರು ಸಹಕರಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಅಂಚೆ ಅದಾಲತ್
ಶಿವಮೊಗ ನಗರದ ಕೋಟೆರಸ್ತೆ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ದಿ: 14/12/2021ರಂದು ಬೆಳಗ್ಗೆ 12.00 ರಿಂದ ಮ. 1.00 ರವರೆಗೆ ಅಂಚೆ ಅದಾಲತ್ ಏರ್ಪಡಿಸಲಾಗಿದೆ.
ಸಾರ್ವಜನಿಕರು ಅಂಚೆ ಇಲಾಖೆಯ ಬಗ್ಗೆ ಸಲಹೆ/ಅಹವಾಲುಗಳಿದ್ದಲ್ಲಿ ಅಂಚೆ ಅಧೀಕ್ಷರಿಗೆ ದಿ: 13/12/2021ರ ಒಳಗೆ ವಿವರಗಳನ್ನು ಬರೆದು ಕಳುಹಿಸುವುದು ಹಾಗೂ ಡಿ.14 ರಂದು ಅಂಚೆ ಅದಾಲತ್ನಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.