ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಕುವೆತ್ತಿಲ್ ಎಂಬಲ್ಲಿ ಕಳೆದ ಮೂರು ದಿನಗಳಿಂದ ಎರಡು ಕಾಡಾನೆಗಳು ರಾಮ್ ಕುಮಾರ್ ಎಂಬವರ ತೋಟಕ್ಕೆ ದಾಳಿ ನಡೆಸಿ ಹೆಚ್ಚಿನ ಪ್ರಮಾಣದ ಕೃಷಿ ಹಾನಿಯುಂಟು ಮಾಡಿವೆ.
ಇದರ ಜತೆಗೆ ಕೃಷಿ ಹಾಗೂ ಮನೆ ಉಪಯೋಗದ ಪೈಪ್ ಲೈನ್ ನ್ನು ಆನೆಗಳು ಪುಡಿಗೈದಿವೆ. ಕಳೆದವಾರ ಒಂಟಿ ಸಲಗ ಇವರ ತೋಟಕ್ಕೆ ದಾಳಿ ಮಾಡಿ ಹಾನಿ ಉಂಟುಮಾಡಿತ್ತು.
ನಿರಂತರ ಆನೆ ದಾಳಿಗೆ ಕೃಷಿ ನಾಶವಾಗುತ್ತಿರುವುದರಿಂದ ರಾಮ್ ಕುಮಾರ್ ಅವರು ಕಂಗೆಟ್ಟಿದ್ದು ಪರಿಹಾರೋಪಾಯಕ್ಕಾಗಿ ಯೋಚನೆ ಮಾಡುವಂತಾಗಿದೆ.
ಸೋಮವಾರ ರಾತ್ರಿ ಆನೆಗಳು ಬೇಗನೆ ದಾಳಿ ನಡೆಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅವುಗಳನ್ನು ಓಡಿಸಿದ ಕಾರಣ ಹೆಚ್ಚಿನ ಹಾನಿ ಉಂಟಾಗುವುದು ತಪ್ಪಿದೆ.