ಮಂಗಳೂರು : ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಸ್ತಬ್ಧಚಿತ್ರ ಪರೇಡ್ನಲ್ಲಿ ಕೇರಳ ರಾಜ್ಯದ ಪ್ರಸ್ತಾವವನ್ನು ಕೇಂದ್ರ ತಿರಸ್ಕರಿಸಿದ್ದು ಸಮಸ್ತ ಮಾನವ ಕುಲಕ್ಕೆ ಮಾಡಿದ ಅವಮಾನ ಎಂದು ಶಾಸಕ ಯು ಟಿ ಖಾದರ್ ಹೇಳಿದ್ದಾರೆ.
ನಗರದ ಸರ್ಕಿಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರು ಜನ ಸಾಮಾನ್ಯರಲ್ಲಿ ದೇವರನ್ನು ಕಂಡವರು. ಅವರ ಸ್ತಬ್ದಚಿತ್ರ ತಿರಸ್ಕರಿಸುವ ಮೂಲಕ ನಾರಾಯಣ ಗುರುಗಳ ತತ್ವ ಆದರ್ಶವನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಸಂದೇಶ ನೀಡಿವೆ . ಬ್ರಹ್ಮಶ್ರೀ ಕೇವಲ ಕೇರಳಕ್ಕೆ ಸೀಮಿತವಲ್ಲ ಶಬ್ದಚಿತ್ರ ತಿರಸ್ಕಾರ ಮಾಡಿದ ಬಗ್ಗೆ ಕೇಂದ್ರ ಪುನರ್ ಚರ್ಚೆ ಮಾಡಬೇಕು ಅದಕ್ಕಾಗಿ ರಾಜ್ಯದ ಜಿಲ್ಲೆಯ ಸಂಸದರು ಮಾತಾಡಬೇಕು ಎಂದು ಅವರು ಆಗ್ರಹಿಸಿದರು.