News Karnataka Kannada
Sunday, April 28 2024
ಮಂಗಳೂರು

“ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಆಸಕ್ತರಿಗೆ ಸ್ವಾಧ್ಯಾಯಕ್ಕಾಗಿ ಪ್ರಕಾಶನಗೊಳಿಸಿದ-ಎಮ್. ಜಯಸೇನ ಇಂದ್ರರು

Dwadashunupekshe
Photo Credit :

ಬೆಳ್ತಂಗಡಿ: ಜೈನಕಾಶಿ ಮೂಡಬಿದ್ರೆಯಲ್ಲಿರುವ ಮಹಾದೇವಿ ಶೆಟ್ಟಿ ಬಸದಿಯ ಅರ್ಚಕರಾದ ಎಮ್. ಜಯಸೇನ ಇಂದ್ರರು ತಮ್ಮ ಗ್ರಂಥ ಭಂಡಾರದಲ್ಲಿದ್ದ “ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಆಸಕ್ತರಿಗೆ ಸ್ವಾಧ್ಯಾಯಕ್ಕಾಗಿ ಪ್ರಕಾಶನಗೊಳಿಸಿದ್ದಾರೆ.
ತಾನು ಪೌರೋಹಿತ್ಯದಿಂದ ಸಂಪಾದಿಸಿದ ಹಣವನ್ನು ಶಾಸ್ತ್ರದಾನ ವಿನಿಯೋಗಿಸುವ ದೃಢ ಸಂಕಲ್ಪ ಮಾಡಿರುವ ಅವರು ಈ ಕೃತಿಯನ್ನು ಗ್ರಂಥಾಲಯಗಳಿಗೆ ಹಾಗೂ ಆಸಕ್ತ ಓದುಗರಿಗೆ “ಶಾಸ್ತ್ರದಾನ”ವಾಗಿ ಉಚಿತವಾಗಿ ವಿತರಿಸುತ್ತಾರೆ.
ಜೈನಧರ್ಮದ ಪ್ರಕಾರ ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗಬಲ್ಲ. ಮೋಕ್ಷ ಪ್ರಾಪ್ತಿಯೇ ಜೀವನದ ಅಂತಿಮ ಗುರಿ. ಅನುಪ್ರೇಕ್ಷೆ ಎಂದರೆ ಬಾರಿ ಬಾರಿ ಚಿಂತಿಸುವುದು ಎಂದು ಅರ್ಥ. ಸ್ವಾಧ್ಯಾಯದ ಮೂಲಕ ತಪದಲ್ಲಿ ಏಕಾಗ್ರತೆ ಉಂಟಾಗಲು ಅನುಪ್ರೇಕ್ಷೆ ಸಹಕಾರಿಯಾಗಿದೆ.
ಮೂಡಬಿದ್ರೆಯ 18 ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್ ಬುಧವಾರ “ದ್ವಾದಶಾನುಪ್ರೇಕ್ಷೆ” ಕೃತಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿಸಿದರು.
ಮೂಡಬಿದ್ರೆಯ 18 ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್ ಅವರ ನೇತೃತ್ವ ಮತ್ತು ಸಹಭಾಗಿತ್ವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ. ಜಯಮಾಲ ಯನ್. ಕೃತಿಯ ಮರು ಪ್ರಕಾಶನಕ್ಕೆ ಸಹಕಾರ ನೀಡಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು