News Karnataka Kannada
Sunday, May 05 2024
ಮಂಗಳೂರು

ಮುಂಡಾಜೆ: ಪುಸ್ತಕ ಬಿಡುಗಡೆ

New Project 2021 09 18t195529.454
Photo Credit :
ಬೆಳ್ತಂಗಡಿ: ಮುಂಡಾಜೆ ಬಾಲಕೃಷ್ಣ ಸಹಸ್ರ ಬುದ್ಧೆಯವರು ಬರೆದ ‘ಬಾಳಪ್ಪನ ಬರಹಗಳು’ ಪುಸ್ತಕದ ಬಿಡುಗಡೆ ಸಮಾರಂಭ ಇಲ್ಲಿನ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾ ಭವನದಲ್ಲಿ ಶುಕ್ರವಾರ ಜರಗಿತು.

ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿ ಲೇಖಕರು ಬೆಳೆದು ಬಂದ ರೀತಿ ಕೃತಿಗಳು ಮೂಡಲು ಕಾರಣವಾಗುತ್ತದೆ.ಸಮಾಜದ ಅಂಕು ಡೊಂಕುಗಳನ್ನು ತಿದ್ದುವ,ಉತ್ತಮ ಸಂದೇಶ ಸಾರುವ ಕೃತಿಗಳು ಲೇಖಕರ ಯಶಸ್ಸಿಗೆ ಸಹಕಾರಿ,ಲೇಖಕನಿಂದ ಉತ್ತಮ ಕೃತಿ ಹೊರಬರಲು ಪ್ರೇರಣೆ ಅವಶ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಶ್ರೀಕರ ಮರಾಠೆ ಮಾತನಾಡಿ ಗುಪ್ತ ಗಾಮಿನಿಯಾದ ಸರಸ್ವತಿ ಕೃತಿಗಳ ಮೂಲಕ ಧಾರೆಯಾಗಿ ಹರಿಯುತ್ತಾಳೆ. ಪ್ರತಿಯೊಂದು ಕೃತಿಯಲ್ಲಿ ಚಿಂತಿಸ ಬೇಕಾದ ವಿಚಾರಗಳಿವೆ.ಓದಿನ ಜತೆ ಕೃತಿಗಳಲ್ಲಿರುವ ಸಂದೇಶಗಳನ್ನು ಮನನ ಮಾಡಿ ಕೊಳ್ಳುವುದು ಮುಖ್ಯ ಎಂದು ಹೇಳಿದರು.

ಮುಂಡಾಜೆ ಪ್ಯಾಕ್ಸ್ ಸಿಇಒ ನಾರಾಯಣ ಫಡ್ಕೆ,ಲೇಖಕ ಸದಾನಂದ ಬಿ.ಶುಭ ಹಾರೈಸಿದರು. ವೀರೇಶ್ವರ ಸಹಸ್ರ ಬುದ್ಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನವಮಿ ಗೋಗಟೆ ಸ್ವಾಗತಿಸಿದರು ಉಜಿರೆ ಎಸ್. ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ಗಣೇಶ್ ಶೆಂಡ್ಯೆ ಕಾರ್ಯಕ್ರಮ ನಿರೂಪಿಸಿದರು.ಸುವರ್ಣಾ ನರೇಂದ್ರ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು