News Karnataka Kannada
Monday, May 06 2024
ಮಂಗಳೂರು

ಡೊಂಗರಕೇರಿ: ಸಾರ್ವಜನಿಕ ಸ್ಥಳದಲ್ಲಿ ಇರಿಸಿದ ಹೂ ಕುಂಡಗಳನ್ನು ತೆರೆವುಗೊಳಿಸಿದ ನಾಗರಿಕರು

Mangalore
Photo Credit : R Bhat

ಡೊಂಗರಕೇರಿ: ಹಲವು ತಿಂಗಳಿಗಳಿಂದ ಡೊಂಗರಕೇರಿಯಲ್ಲಿ  ಅನಧಿಕೃತವಾಗಿ ಪ್ರತಿಷ್ಠಿತ ಹೃದಯತಜ್ಞರ ಮನೆಯ ಮುಂಭಾಗದಲ್ಲಿ ಇಟ್ಟಂಥಹ ಹೂವಿನ- ಕುಂಡದ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ, ಬಂದರು ಪೊಲೀಸ್ ಠಾಣೆಗೆ ಈ ವಿಚಾರಗಳ ಬಗ್ಗೆ ಮನವಿಯನ್ನ ಸಲ್ಲಿಸಿದ್ದು, ರಾಜಕೀಯ ಒತ್ತಡಕ್ಕೆ ಮಣಿದು ಡೊಂಗರಕೇರಿ ಪರಿಸರದ ನಾಗರೀಕರಿಗೆ ಯಾವುದೇ ರೀತಿಯಲ್ಲಿ ನ್ಯಾಯ ಸಿಗಲಿಲ್ಲಾ.

ಮೇ.4ರಂದು ಅದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿ ಮಂಗಳೂರು ಮಹಾನಗರ ಪಾಲಿಕೆಗೆ,ಮಾಧ್ಯಮ ಸ್ನೇಹಿತರ ಮುಖಾಂತರ ಮುಂದಿನ 10 ದಿನಗಳಲ್ಲಿ ಈ ಹೂವಿನ ಕುಂಡವನ್ನು ತೆರವುಗೊಳಸದೇ ಇದ್ದಲ್ಲಿ ಸಾರ್ವಜನಿಕರೇ ಸೇರಿ ಮಹಾನಗರ ಪಾಲಿಕೆ ಮಾಡುವಂತಹ ಕೆಲಸ ಮಾಡಿ ತೋರಿಸುತ್ತೇವೆ ಎಂಬ  ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ಕೂಡ ರವಾಣಿಸಿದ್ದೆವು.

ಶಾಂತಿ ಸಂದೇಶವನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧರ ಬುದ್ಧ ಪೂರ್ಣಿಮೆಯ ವಿಶೇಷ ದಿನದಂದು ಸಾರ್ವಜನಿಕರಿಗೆ ತೊಂದರೆಯಾಗಬರದೆಂಬ ಉದ್ದೇಶದಿಂದ ಜನರನ್ನು ಸೇರಿಸದೆ, ಮೊದಲಿಗೆ ಡೊಂಗರಕೇರಿಯ ಕಟ್ಟೆಯಲ್ಲಿ ನೆಲೆಸಿರುವ ಬ್ರಹ್ಮರ ಹಾಗೂ ನಾಗ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಅನಧಿಕೃತವಾಗಿ ಇಟ್ಟಂಥಹ ಹೂವಿನ-ಕುಂಡವನ್ನು ಡೊಂಗರಕೇರಿ ಪರಿಸರದ ನಿವಾಸಿಗಳ ಹಿತದೃಷ್ಟಿಯಿಂದ ಹೂ-ಕುಂಡವನ್ನು ತೆರೆವುಗೊಳಿಸಲಾಯಿತು.

ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾದಾಗ ಸ್ಥಳೀಯ ಮಹಾನಗರ ಪಾಲಿಕೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಮುಂದೆ ಬಂದು ಮಹಾನಗರ ಪಾಲಿಕೆ ಮಾಡುವಂತಹ ಕೆಲಸವನ್ನು ಸಾರ್ವಜನಿಕರೇ ಮಾಡಲು ಸಿದ್ಧರಿರುತ್ತೇವೆ ಹಾಗೂ ಇಂಥಹ ಸನ್ನಿವೇಶಗಳು ಉದ್ಭವವಾದಲ್ಲಿ ಸಾರ್ವಜನಿಕರಿಗೆ ಮಂಗಳೂರು ಮಹಾನಗರ ಪಾಲಿಕೆಯ ವೈಫಲ್ಯ ಎದ್ದು ತೋರಿಸುತ್ತದೆ.

ಈ ಸಂದರ್ಭದಲ್ಲಿ ನಾನು ಜನರಿಗೆ ಕೊಟ್ಟಂತಹ ಮಾತಿಗೆ, ಜನರು ನನ್ನ ಮೇಲೆ ಇಟ್ಟಂಥಹ ವಿಶ್ವಾಸಕ್ಕೆ ಯಾವುದೇ ರೀತಿಯ ಕುಂದು ಕೊರೆತೆ ಬರದಾಗೆ, ಜನರಿಗೋಸ್ಕರ ಯಾವುದೇ ಹೊರಾಟಕ್ಕೂ ಸಿದ್ಧ ಎಂದು ಕಾಂಗ್ರೆಸ್ ನಾಯಕಿ ಮಂಜುಳಾ ನಾಯಕ್  ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು