News Karnataka Kannada
Tuesday, April 30 2024
ಮಂಗಳೂರು

ಕಳೆಂಜದಲ್ಲಿ ಯಕ್ಷಭಾರತಿ ವತಿಯಿಂದ 2 ದಿನಗಳ ಸಂಸ್ಕಾರ ಶಿಕ್ಷಣ ಶಿಬಿರ

Yaksha Bharathi
Photo Credit : News Kannada

ಬೆಳ್ತಂಗಡಿ: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಸ್ಥಾನದ ಆವರಣದಲ್ಲಿ ಯಕ್ಷಭಾರತಿ( ರಿ.) ಕನ್ಯಾಡಿ ಇದರ ಶಿಕ್ಷಣ ಸೇವಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆದ ಎರಡು ದಿನದ ಸಂಸ್ಕಾರ ಶಿಕ್ಷಣ ಶಿಬಿರವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ ರಾವ್ ಮುಂಡ್ರುಪ್ಪಾಡಿ ಉದ್ಘಾಟಿಸಿ ಇಂದಿನ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಸಂಸ್ಕಾರ ಶಿಕ್ಷಣ ಶಿಬಿರದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಶಿಬಿರದ ಪೂರ್ಣ ಪ್ರಯೋಜನೆ ಪಡೆದು ಬದುಕಿನಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಮುಖ್ಯ ಅಭ್ಯಾಗತರಾದ ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯರು ಶಿಬಿರಾರ್ಥಿಗಳಿಗೆ ದೇವರ ಅನುಗ್ರಹವಿರಲೆಂದು ಶುಭ ಹಾರೈಸಿದರು. ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ರಾವ್ ಕಾಯಡ, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹರಿದಾಸ ಗಾಂಭೀರ ಧರ್ಮಸ್ಥಳ, ಅಂಶುಮಾನ್ ಅಭ್ಯಂಕರ್ ಉಪಸ್ಥಿತರಿದ್ದರು.

ಯಕ್ಷಭಾರತಿ(ರಿ ) ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ,. ಕುl ಪ್ರಜ್ಞಾ ಮತ್ತು ಬಳಗ ಪ್ರಾರ್ಥಿಸಿ,. ಸಂಚಾಲಕ ಮಹೇಶ ಕನ್ಯಾಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಬಿರ ಸಂಯೋಜಕ ಕುಸುಮಾಕರ ಕೊತ್ತೋಡಿ ವಂದಿಸಿದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅಂಶುಮಾನ್ ಅಭ್ಯಂಕರ್ ಅವರು ಭಗವದ್ಗೀತೆಯ ಶ್ಲೋಕಗಳ ಪಠಣಾಭ್ಯಾಸ, ಹರಿದಾಸ ಗಾಂಭೀರ ಅವರು ಪುರಾಣದ ಕಥೆಗಳು, ಉದಯ ಸುಬ್ರಹ್ಮಣ್ಯ ಅವರು ಯೋಗ ಮತ್ತು ಆರೋಗ್ಯ, ಸುದರ್ಶನ ಕನ್ಯಾಡಿಯವರು ದೇಶೀಯ ಆಟಗಳು, ಹರೀಶ ನೆರಿಯ ಅವರು ಭಜನೆ ಮತ್ತು ಭಕ್ತಿ ಕುರಿತಾದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು .

ಸಮಾರೋಪ ಸಮಾರಂಭ
ಎರಡು ದಿನದ ಸಂಸ್ಕಾರ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ದೀಪ ಜ್ಯೋತಿ ಕಾರ್ಯಕ್ರಮದೊಂದಿಗೆ ನಡೆಯಿತು. ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಧರ ರಾವ್ ಕಾಯಡ, ಅಳದಂಗಡಿ ಜೂನಿಯರ್ ಕಾಲೇಜಿನ ಪ್ರಾಧ್ಯಾಪಕ ಶ್ರೀಮತಿ ಭಾರತಿ ಎಂ ಎಲ್ . , ಉಜಿರೆ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾರೀರಿಕ ಪ್ರಮುಖ್ ತಿಲಕ್ ಪಟ್ರಮೆ ಉಪಸ್ಥಿತರಿದ್ದರು. ಶ್ರೀಮತಿ ಸುರೇಖಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಕುlಪ್ರತಿಮಾ ಸ್ವಾಗತಿಸಿ, ಕುಸುಮಾಕರ ಕೊತ್ತೋಡಿ ಧನ್ಯವಾದ ಅರ್ಪಿಸಿದರು. ಎರಡನೇ ದಿನದ ಶಿಬಿರದಲ್ಲಿ ಮಹಾಭಾರತದ ಕಥೆಗಳು ವಿಷಯವಾಗಿ ಮಹೇಶ ಕನ್ಯಾಡಿ, ಯೋಗ-ಆರೋಗ್ಯ ವಿಷಯದ ಕುರಿತು ಶ್ರೀ ಧ.ಮ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡಾlಶಂಕರ್, ಭಜನೆಯ ವಿಷಯದಕುರಿತು ಶ್ರೀಮತಿ ಸುರೇಖಾ, ನನ್ನ ದೇಶ ಭಾರತ ವಿಷಯದ ಕುರಿತು ತಿಲಕ್ ಪಟ್ರಮೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಪರಿಸರದ ಒಟ್ಟು 61 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು