News Karnataka Kannada
Tuesday, May 07 2024
ಮಂಗಳೂರು

ಜೂ. 3, 4ರಂದು ರಾಮಕೃಷ್ಣ ಮಠದ ಅಮೃತ ಮಹೋತ್ಸವ

Ramakrishna Matt
Photo Credit :

ಮಂಗಳೂರು: ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಜೂ. 3ರಂದು 75 ಸಂವತ್ಸರಗಳನ್ನು ಪೂರ್ಣಗೊಳಿಸುತ್ತಿದ್ದು ಜೂನ್‌ 3, 4ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹರಾಜ್ ಉಪಾಧಕ್ಷರು ರಾಮಕೃಷ್ಣ ಮಠ ಮತ್ತು ರಾಮಕೃಷ ಮಿಷನ್, ಬೇಲೂರು ಮಠ, ಪಶ್ಚಿಮ ಬಂಗಾಳ, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರು ಸ್ವಾಮಿ ಜಿತಕಾಮಾನಂದಜಿ, ಸ್ವಾಮಿ ಮುಕ್ತಿದಾನಂದಜಿ, ವಿಶ್ವಸ್ಥರು, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಬೇಲೂರು ಮಠ, ಪಶ್ಚಿಮ ಬಂಗಾಳ, ಇವರ ಉಪಸ್ಥಿತಿಯಲ್ಲಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಎನ್. ವಿನಯ್ ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಪ್ರೇಮಾನಂದ ಶೆಟ್ಟಿ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು ನಳಿನ್ ಕುಮಾರ್ ಕಟೀಲು, ಕರ್ನಾಟಕ ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ್ ಭಂಡಾರಿ, ಗದಗ ಪೂರ್ವ ಶಾಸಕ ಡಿ. ಆರ್ ಪಾಟೀಲ್, ಮಂಗಳೂರು ದಕ್ಷಿಣ ಶಾಸಕರು ಡಿ. ವೇದವ್ಯಾಸ್ ಕಾಮತ್, ಕರ್ನಾಟಕ ವಿಧಾನ ಪರಿಷತ್ ಪೂರ್ವ ಶಾಸಕರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ದಯಾನಂದ ಪೈ, ಉದ್ಯಮಿ ಹಾಗೂ ಸಮಾಜ ಸೇವಕರು ಬೆಂಗಳೂರು, ಭಾಗಿಯಾಗಲಿದ್ದಾರೆ.

ಜೂ. 3ರಂದು ಬೆಳಿಗ್ಗೆ 6.30ಕ್ಕೆ ವಿಶೇಷ ಪೂಜೆ, ಹೋಮಹವನ ಬೆಳಿಗ್ಗೆ 8.15ಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ವಾಮಿ ಗೌತಮಾನಂದಜಿ ಮಹಾರಾಜ್‌ ಉಪಸ್ಥಿತಿಯಲ್ಲಿ ಸಾಧು, ಭಕ್ತರ ಶೋಭಾಯಾತ್ರೆ ಶ್ರೀಮಠದ ವರೆಗೆ ನಡೆಯಲಿದೆ. ಬಳಿಕ 9.15ಕ್ಕೆ ಮಠದ ನೂತನ ಮಹಾದ್ವಾರದ ಲೋಕಾರ್ಪಣೆ ಜರುಗಲಿದೆ. 9.30ಕ್ಕೆ ‘ಅಮೃತ ಸದನ’ ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸದ ಉದ್ಘಾಟನೆಯಾಗಲಿದೆ.

9.45ಕ್ಕೆ ಉದ್ದೇಶಿತ ಅಮೃತ ಭವನ ವಿವೇಕಾನಂದ ತರಬೇತಿ ಕೇಂದ್ರದ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಿಗಲ್ಲು ಹಾಕಲಿದ್ದಾರೆ. ಉದ್ಯಮಿ ದಯಾನಂದ ಪೈ ಭಾಗಿಯಾಗುವರು. 10 ಗಂಟೆಗೆ ಅಮೃತ ಮಹೋತ್ಸವ ಹಾಗೂ ‘ಅಮೃತ ಸಂಗಮ’ ರಾಜ್ಯ ಮಟ್ಟದ ಎರಡು ದಿನಗಳ ಸಾಧು ಭಕ್ತ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಮೃತ ಮಹೋತ್ಸವ ಉದ್ಘಾಟಿಸುವರು. ಸ್ವಾಮಿ ಮುಕ್ತಿದಾನಂದಜಿ ಹಾಗೂ ಸ್ವಾಮಿ ಜಿತಕಾಮಾನಂದಜಿ ಸಹಿತ ನಿಟ್ಟೆ ವಿ.ವಿ. ಕುಲಾಧಿಪತಿ ಎನ್‌. ವಿನಯ ಹೆಗ್ಡೆ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮೇಯರ್‌ ಪ್ರೇಮಾನಂದ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.

ರಾಮಕೃಷ್ಣ ಮಠದ ಅಮೃತ ಮಹೋತ್ಸವದ ಪ್ರಯುಕ್ತ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಹೊರತಂದಿದೆ. ಅದನ್ನು ಕರ್ನಾಟಕದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎನ್. ರಾಜೇಂದ್ರ ಕುಮಾರ್ ಮಠಕ್ಕೆ ಹಸ್ತಾಂತರಿಸುವರು. ಮಠದ ಸ್ಮರಣ ಸಂಚಿಕೆಯನ್ನು ಸ್ವಾಮಿ ಮುಕ್ತಿದಾನಂದಜಿ, ಸಾಕ್ಷ್ಯಚಿತ್ರವನ್ನು ಡಾ. ಎನ್. ವಿನಯ ಹೆಗ್ಡೆ ಬಿಡುಗಡೆ ಮಾಡುವರು. ನೂತನ ವೆಬ್‌ಸೈಟ್ ಅನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಲೋಕಾರ್ಪಣೆಗೊಳಿಸಲಿದ್ದಾರೆ.

ಜೂ. 4ರಂದು ಸಂಜೆ 4.45ಕ್ಕೆ ಸಮಾರೋಪ ಜರಗಲಿದ್ದು,ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹರಾಜ್ ಉಪಾಧಕ್ಷರು ರಾಮಕೃಷ್ಣ ಮಠ ಮತ್ತು ರಾಮಕೃಷ ಮಿಷನ್, ಬೇಲೂರು ಮಠ, ಪಶ್ಚಿಮ ಬಂಗಾಳ, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರು ಸ್ವಾಮಿ ಜಿತಕಾಮಾನಂದಜಿ, ಸ್ವಾಮಿ ಮುಕ್ತಿದಾನಂದಜಿ, ವಿಶ್ವಸ್ಥರು, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಬೇಲೂರು ಮಠ, ಪಶ್ಚಿಮ ಬಂಗಾಳ, ಇವರ ಉಪಸ್ಥಿತಿಯಲ್ಲಿ, ವಿಧಾನ ಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್‌, ವಿ. ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ ಕಾರ್ಣಿಕ್‌, ಜಿಲ್ಲಾಧಿಕಾರಿ ಡಾ| ರಾಜೇಂದ್ರ, ಜಿಪಂ ಸಿಇಒ ಡಾ| ಕುಮಾರ್‌, ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪಾಲ್ಗೊಳ್ಳಲಿದ್ದಾರೆ ಎಂದರು.

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಎರಡು ದಿನಗಳ ಚಿತಂನ-ಮಂಥನ ಕಾರ್ಯಕ್ರಮದಲ್ಲಿ ನಡೆಯಲಿರುವ ಗೋಷ್ಟಿಗಳು:

ಜೂನ್ 3 ರಂದು ನಡೆಯಲಿರುವ ಮೊದಲನೇ ಗೋಷ್ಟಿಯಲ್ಲಿ ಯುಗಾವತಾರಿ-ಸರಳತೆ ರಾಯಭಾರಿ, ಸ್ವಾಮಿ ನಿತ್ಯಸ್ಥಾನಂದಜಿ ಅಧ್ಯಕ್ಷರು, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು. ಸರಳತೆ, ಗಾಂಭೀರ್ಯದ ಸಂಗಮ- ಶ್ರೀಮಾತೆ, ಸ್ವಾಮಿ ಅನುಪಮಾನಂದಜಿ, ಮುಖ್ಯಸ್ಥರು, ರಾಮಕೃಷ್ಣ ಮಿಷನ್, ಚಂಡೀಘಡ. ಸರಳತೆಯ ಸಂತನೀತ-ವಶ್ವವಿಜೇತ, ಮುಖ್ಯಸ್ಥರು, ರಾಮಕೃಷ್ಣ ಮಿಷನ್, ದಾವಣಗೆರೆ ಇವರು ವಿಚಾರ ಮಂಡಿಸಲಿದ್ದಾರೆ.

ಎರಡನೇ ಗೋಷ್ಟಿ ಯಲ್ಲಿ ಸರಳತೆ ಮತ್ತು ನಾಯಕತ್ವ , ಸ್ವಾಮಿ ನಿರ್ಭಯಾನಂದಜಿ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ಗದಗ. ಸರಳ ಬದುಕಿನ ಹೊರನೋಟ ಮತ್ತು ಒಳನೋಟ, ಸ್ವಾಮಿ ವೀರೇಶಾನಂದಜಿ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ತುಮಕೂರು. ಸಂತರಾಜ್ಯದ ಸರಳತೆಯ ಚಕ್ರವರ್ತಿ, ಸ್ವಾಮಿ ಪ್ರಕಾಶಾನಂದಜಿ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ರಾಣಿಬೆನ್ನೂರು,

ಗೋಷ್ಟಿ 3: ಸರಳತೆಗೊಲಿದ ಶ್ರೀಕೃಷ್ಣ, ಡಾ, ವೀಣಾ ಬನ್ನಂಜೆ ಆಧ್ಯಾತ್ಮಿಕ ಚಿಂತಕರು, ಉಡುಪಿ

ಜೂನ್ 4 ರಂದು ನಡೆಯಲಿರು ಗೋಷ್ಟಿ 4: ಸರಳತೆ-ವ್ಯಕ್ತಿತ್ವದ ಸಮಗ್ರತೆ, ಸ್ವಾಮಿ ಜ್ಙಾನಯೋಗಾನಂದಜಿ, ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ರಾಮಕೃಷ್ಣ ಆಶ್ರಮ, ಮೈಸೂರು.

ಸರಳತೆ-ದಾರ್ಕನಿಕರ ಜೀವನಸೂತ್ರ, ಸ್ವಾಮಿ ಮಂಗಳನಾಥಾನಂದಜಿ, ರಾಮಕೃಷ್ಣ ಮಿಷನ್, ಶಿವನಹಳ್ಳಿ, ಬೆಂಗಳೂರು.
ಸರಳತೆ ಜೀವನ-ಉದಾತ್ತ ಚಿಂತನ, ಸ್ವಾಮಿ ಮಹಾಮೇಧಾಂದಜಿ, ಸಂಪಾದಕರು, ವೇದಾಂತ ಕೇಸರಿ, ರಾಮಕೃಷ್ಣ ಮಠ, ಚೆನ್ನೈ ಇವರುಗಳಿಂದ ನಡೆಯಲಿದೆ.

ಗೋಷ್ಟಿ 5: ಸರಳತೆ-ಪಕ್ವ ಮನದ ಅಭಿವ್ಯಕ್ತಿ, ಮಾತಾಜಿ ಯೋಗಾನಂದಮಯಿ, ಅಧ್ಯಕ್ಷರು, ಸಾಧನಾಶ್ರಮ, ದಾವಣಗೆರೆ.
ಸರಳತೆಯೇ ವಿದ್ಯೆಗೆ ಶೋಬೆ, ಮಾತಾಜಿ ವಿವೇಕಮಯಿ, ಅಧ್ಯಕ್ಷರು, ಭವತಾರಿಣಿ ಆಶ್ರಮ, ಬೆಂಗಳೂರು.
ಸಂತರ ಜೀವನದಲ್ಲಿ ಸರಳತೆ, ಮಾತಾಜಿ ತ್ಯಾಗಮಯಿ, ಅಧ್ಯಕ್ಷರು, ಶ್ರೀ ಶಾರದಾಶ್ರಮ, ಚಳ್ಳಕೆರೆ ಇವರಿಂದ ವಿಚಾರ ಮಂಡನೆ ನಡೆಯಲಿದೆ.

ಗೋಷ್ಟಿ 6: ಶ್ರೀರಾಮ-ಸರಳತೆ ಸಾಕಾರಮೂರ್ತಿ,ಸ್ವಾಮಿ ಅಘಹರಾನಂದಜಿ, ರಾಮಕೃಷ್ಣ ವಿದ್ಯಾಶಾಲಾ. ಮೈಸೂರು.
ವಚನಗಳಲ್ಲಿ ನಿರಾಡಂಬರತೆಯ ಮಹತ್ವ, ಡಾ, ಮುರಳೀಧರ ಹೆಚ್.ಎನ್, ಸಾಹಿತಿಗಳು, ಬೆಂಗಳೂರು. ಸದುವಿನಯವೇ ಸದಾಶಿವನೊಲುಮೆ, ಡಾ.ಜಿ.ಎಸ್.ಮರಿಗುದ್ದಿ, ಸಾಹಿತಿಗಳು, ಬೆಳಗಾವಿ.

ಜೂನ್ 4 ರಂದು ನಡೆಯಲಿರುವ ವಿಶೇಷ ಗೋಷ್ಟಿಯಲ್ಲಿ ರಾಮಕೃಷ್ಣ ಮಠ ಮಂಗಳೂರು-75 ವರ್ಷಗಳ ಪಯಣ, ಸ್ವಾಮಿ ಜಿತಕಾಮಾನಂದಜಿ, ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು.

ಮಂಗಳೂರು ರಾಮಕೃಷ್ಣ ಮಠದ ನೂತನ ಕಾರ್ಯಕ್ರಮಗಳು ಹಾಗೂ ಪ್ರಯೋಗಗಳು, ಸ್ವಾಮಿ ಏಕಗಮ್ಯಾನಂದಜಿ, ರಾಮಕೃಷ್ಣ ಮಠ, ಮಂಗಳೂರು.

ಮಂಗಳೂರಿನ ರಾಮಕೃಷ್ಣ ಮಠ-ಸ್ಫೂರ್ತಿಯ ಕೇಂದ್ರ, ಶ್ರೀ ರಂಜನ್ ಬೆಳ್ಳರ್ಪಾಡಿ, ಸ್ವಯಂ ಸೇವಕರು, ರಾಮಕೃಷ್ಣ ಮಠ, ಮಂಗಳೂರು. ಇವರು ವಿಚಾರ ಮಂಡಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ

ಜೂ.4ರಂದು ಸಂಜೆ 7 ರಿಂದ 8 ಗಂಟೆ ವರೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ಹಾಗೂ ಶ್ರೀ ರಾಮ ಪಟ್ಟಾಭಿಷೇಕ, ಯಕ್ಷ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು