ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಬುಧವಾರ ಮಧ್ಯಾಹ್ನ 31 ವರ್ಷದ ಗರ್ಭಿಣಿ ಶಾಲಾ ಶಿಕ್ಷಕಿಯನ್ನು ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ಘಟನೆಯು ಅಯೋಧ್ಯೆಯ ಕೊತ್ವಾಲಿ ಪ್ರದೇಶದ ಶ್ರೀ ರಾಮ್ ಪುರಂ ಕಾಲೋನಿಯಲ್ಲಿ ನಡೆದಿದ್ದು, ಹತ್ಯೆಗೀಡಾದವರನ್ನು ಪತ್ನಿ ಸುಪ್ರಿಯಾ ವರ್ಮಾ ಎಂದು ಗುರುತಿಸಲಾಗಿದೆ.
ಈಕೆ ತನ್ನ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಅಪರಿಚಿತ ದುಷ್ಕರ್ಮಿಗಳು ಬಂದು ಹಾಡಹಗಲೇ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶಿಕ್ಷಕಿ ಸುಪ್ರಿಯಾ ವರ್ಮಾ ಪತಿ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ತನ್ನ ತಾಯಿಯೊಂದಿಗೆ ವಾಸವಿದ್ದರು. ಬುಧವಾರ 11 ಗಂಟೆ ಸುಮಾರಿಗೆ ಪತಿ ಉಮೇಶ್ ಚಂದ್ ವರ್ಮಾ ತನ್ನ ಪತ್ನಿಯನ್ನು ಅತ್ತೆಯ ಮನೆಯಲ್ಲಿ ಬಿಟ್ಟು ಅತ್ತೆಯೊಂದಿಗೆ ಬ್ಯಾಂಕ್ಗೆ ಹೋಗಿದ್ದು, ಅಲ್ಲಿಂದ ಹಿಂತಿರುಗಿದಾಗ ಬಾಗಿಲು ತೆರೆದು ನೋಡಿದ್ದು ಕಂಡು ಬಂದಿದೆ. ಈ ವೇಳೆ ಸುಪ್ರಿಯಾ ರಕ್ತದಲ್ಲಿ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ವೈದ್ಯರು ಸುಪ್ರಿಯಾ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತಳ ದೇಹದ ಮೇಲೆ ಇರಿತದ ಗುರುತುಗಳು ಕಂಡುಬಂದಿವೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.