ಪೂಜ್ಯ ಮಹಾಪೌರರು ಮಂಗಳೂರು ಮಹಾನಗರಪಾಲಿಕೆ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಆಯುಕ್ತರು ಮಂಗಳೂರು ಮಹಾನಗರಪಾಲಿಕೆ ಇವರ ಉಪಸ್ಥಿತಿಯಲ್ಲಿ ದಿನಾಂಕ: 28-03-2022ರ ಪೂರ್ವಾಹ್ನ 12:30ಕ್ಕೆ ಸ್ಥಾಯಿ ಸಮಿತಿ ಸಭಾಂಗಣ ಮಂಗಳೂರು ಮಹಾನಗರಪಾಲಿಕೆ ಇಲ್ಲಿ ಪಟ್ಟಣ ವ್ಯಾಪಾರ ಸಮಿತಿ ಸಭೆಯನ್ನು ನಡೆಸಲಾಯಿತು.
ಕೇಂದ್ರ ಸರ್ಕಾರದ ಪಿ.ಎಂ.ಸ್ವಾನಿಧಿ ಯೋಜನೆಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಒಂದು ಬ್ಯಾಂಕ್ನಲ್ಲಿ ಸಾಲ ಮಂಜೂರಾತಿ ಆಗದಿದ್ದಲ್ಲಿ ಬೇರೆ ಯಾವುದಾದರೂ ಬ್ಯಾಂಕಿಗೆ ಕಳುಹಿಸಿಕೊಡಬಹುದೆಂದು ಮತ್ತು ಸಿಬಿಲ್ನಲ್ಲಿರುವ ಸಾಲದ ಬಾಕಿಯ ವಿವರಗಳನ್ನು ಸರ್ಕಾರದ ಯಾವುದೇ ಯೋಜನೆಗೆಳಿಗೆ ಪರಿಗಣನೆಗೆ ತೆಗೆದುಕೊಳ್ಳಬಾರದೆಂದು ನಿಯಮ ಇರುವುದರಿಂದ ಬ್ಯಾಂಕ್ಗಳಲ್ಲಿ ಪಿಎಂಸ್ವನಿಧಿಯಲ್ಲಿ ಬಾಕಿ ಇರುವ ಎಲ್ಲಾ ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡುವ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ರವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಬೀದಿ ಬದಿ ವ್ಯಾಪಾರಸ್ಥರ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರಿಗಳ ವಿನಿಯಂತ್ರಣ) ಅಧಿನಿಯಮ 2014ರಲ್ಲಿ ತಿಳಿತಿಸಿರುವ ನಿಯಮಗಳ ಅನ್ವಯ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರನ್ನು ಹೊರತು ಪಡಿಸಿ ಉಳಿದವರನ್ನು ಕಾರ್ಯಾಚರಣೆ ಮಾಡಿ ತೆರವುಗೊಳಿಸಲಾಗುವುದು.
ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂಧಿಯವರಿರುತ್ತಾರೆ. ಕಾರ್ಯಾಚರಣೆಯಲ್ಲಿ ಪ್ರಸ್ತುತ ಪಟ್ಟಣ ವ್ಯಾಪಾರ ಸಮಿತಿಯಲ್ಲಿರುವ ಚುನಾಯಿತ ಬೀದಿ ಬದಿ ವ್ಯಾಪಾರಸ್ಥರು ಸಂಪೂರ್ಣ ಸಹಕಾರ ನೀಡಬೇಕು.
ಪ್ರಥಮ ಹಂತವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಮೈದಾನ ರಸ್ತೆ, ಲೇಡಿಗೋಷನ್ ಮುಂಬಾಗ, ಸರ್ವೀಸ್ಸ್ ಬಸ್ಸ್ ಸ್ಟ್ಯಾಂಡ್ ಮತ್ತು ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ದಿನಾಂಕ: 30-03-2022ರಂದು ಕಾರ್ಯಾಚರಣೆಗೊಳಿಸಲಾಗುವುದು
ಸಾರ್ವಜನಿಕರ ಜೀವಕ್ಕೆ ತೊಂದರೆ ಆಗುವಂತಹ ಬೀದಿ ಬದಿಯ ಆಹಾರ ವ್ಯಾಪಾರಿಗಳು ಬಳಸುವ ಬಾರೀ ಮಟ್ಟದ ಅಡುಗೆ ಅನಿಲವನ್ನು ನಿರ್ದಾಕ್ಷಣ್ಯವಾಗಿ ಜಪ್ತಿ ಮಾಡಿ ಮುಟ್ಟುಗೋಲ ಹಾಕಲಾಗುವುದು.
ನಿಜವಾದ ಬಡ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆಯನ್ನು ಕಾಪಾಡುವ ಸಲುವಾಗಿ ಮಂಗಳೂರು ಮಹಾನಗರಪಾಲಿಕೆ ಮತ್ತು ಪೊಲೀಸ್ ಇಲಾಖೆಯು ಕಾರ್ಯಾಚರಣೆಗೊಳಿಸಲಾಗುವುದು.
ಈಗಾಗಲೇ ಕೈಗೊಂಡಿರುವ ಸಮೀಕ್ಷೆಯ ಆಧಾರದ ಮೇಲೆ ಬೀದಿ ಬದಿ ವ್ಯಾಪಾರಸ್ಥರ ವಲಯವನ್ನು ಗುರುತಿಸುವುದು ಮತ್ತು ಘೋಷಣೆ ಮಾಡಲಾಗುವುದು. ಸಭೆಯಲ್ಲಿ ಉಪ ಮಹಾಪೌರರು, ಪಾಲಿಕೆ ಅಧಿಕಾರಿಗಳು ಹಾಗೂ ಪಟ್ಟಣ ವ್ಯಾಪರ ಸಮಿತಿಯ ಸದಸ್ಯರು ಭಾಗವಹಿಸಿದರು