ಮಂಗಳೂರು : ಹಂಪನಕಟ್ಟೆ ಬಳಿ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರಿಂದ ನುಗ್ಗಲು ಯತ್ನ. ಹಂಪನಕಟ್ಟೆ ಬಳಿ ಪದವಿ ಪೂರ್ವ ಕಾಲೇಜು ಕಟ್ಟಡ ಶಿಲನ್ಯಾಸಕ್ಕೆ ಆಗಮಿಸಿದ್ದ ಸಚಿವ ನಾಗೇಶ್. ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ವೇಳೆ ರಸ್ತೆಯಲ್ಲೇ ತಡೆದ ಪೊಲೀಸರು.
ಕಾರ್ಯಕ್ರಮದ ವೇದಿಕೆಯ ಅನತಿ ದೂರದಲ್ಲಿ ತಡೆದ ಪೊಲೀಸರು. ಸಮವಸ್ತ್ರ ಹಂಚಿಕೆಯಲ್ಲಿ ಸಚಿವರಿಂದ ಗೋಲ್ ಮಾಲ್ ಆರೋಪಿಸಿ ಪ್ರತಿಭಟನೆ.
ಬಿ.ಸಿ.ನಾಗೇಶ್ ಗೋ ಬ್ಯಾಕ್ ಅಂತ ಘೋಷಣೆ ಕೂಗಿ ಧಿಕ್ಕಾರ. ಸದ್ಯ ಮಂಗಳೂರು ಪುರಭವನದ ಆವರಣದಲ್ಲಿ ಸಿಎಫ್ ಐ ಕಾರ್ಯಕರ್ತರನ್ನ ಕೂಡಿ ಹಾಕಿರುವ ಪೊಲೀಸರು.