ಮಂಗಳೂರು: ಕ್ಲಾಕ್ ಟವರ್ ನಿಂದ ಎಬಿಶೆಟ್ಟಿ ಕಡೆಗೆ ಸಾಗುವ ರಸ್ತೆಯಲ್ಲಿ ಅಂಡರ್ ಪಾಸ್ ಕಾಮಗಾರಿಗೆ ಹಿನ್ನೆಲೆಯಲ್ಲಿ ಪುರಭವನ ಎದುರಿನ ಗಾಂಧಿ ಪಾರ್ಕ್ ಮೂಲಸ್ವರೂಪ ಕಳೆದುಕೊಂಡಿದ್ದು ಪಾರ್ಕಿಗೆ ಮರುಜೀವ ನೀಡಲು ಸ್ಮಾರ್ಟ್ ಸಿಟಿ ಮುಂದಾಗಿವೆ.
ಕಾಮಗಾರಿ ಹಿನ್ನೆಲೆಯಲ್ಲಿ ಪಾರ್ಕ್ ತನ್ನ ಅಸ್ತಿತ್ವ ಕಳೆದುಕೊಂಡಿದ್ದು ಸದ್ಯ ಇಲ್ಲಿ ಸಮತಟ್ಟು ಪ್ರದೇಶ ನಿರ್ಮಾಣವಾಗಿದೆ ಪಾರ್ಕಿನ ಪಾಶ್ರ್ವದಲ್ಲಿ ಅಂಡರ್ ಪಾಸ್ ಸಾಗುವ ಕಾರಣದಿಂದಾಗಿ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯು ವುದರಿಂದ ಪಾರ್ಕ್ ಪ್ರದೇಶದ ಯಾವುದೇ ಕುರುಹುಗಳು ಸದ್ಯ ಇಲ್ಲ .
ಆದರೆ ಮುಂದಿನ ದಿನಗಳಲ್ಲಿ ಈ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಸ್ಮಾರ್ಟ್ ಸಿಟಿ ಯೋಜನೆ ರೂಪಿಸುತ್ತಿದೆ .ಪುರಭವನದ ಎದುರು ಗಾಂಧಿಪಾರ್ಕ್ ಮತ್ತೆ ನಿರ್ಮಾಣಗೊಳ್ಳಲಿದೆ ಕಾಮಗಾರಿಗೆ ಮುನ್ನ ಪಾರ್ಕ್ ಯಾವ ಸ್ಥಿತಿಯಲ್ಲಿತ್ತೋ ಅದಕ್ಕಿಂತ ಸುಂದರವಾಗಿ ಆಕರ್ಷಿಣೀಯವಾಗಿ ಪಾರ್ಕ್ ಕಂಗೊಳಿಸಲಿವೆ ಪಾರ್ಕ್ ನೊಳಗೆ ಬಯಲು ರಂಗಮಂದಿರ ಸಹಿತ ಗಾಂಧಿ ಪ್ರತಿಮೆ ಮರು ನಿರ್ಮಾಣ ಮಾಡಲಾಗುತ್ತದೆ ಈ ಹಿನ್ನೆಲೆಯಲ್ಲಿ ನೀಲನಕ್ಷೆ ತಯಾರಾಗಿದ್ದು ಈಗಾಗಲೇ ಮೊದಲನೇ ಹಂತದ ಕಾಮಗಾರಿ ಆರಂಭಗೊಳ್ಳಲಿದೆ .
ಇನ್ನು ವಾಕಿಂಗ್ ಪಾತ್ ಕೂಡ ನಿರ್ಮಾಣವಾಗುತ್ತಿದೆ ಪುರಭವನ ಎದುರಿನ ಗಾಂಧಿ ಪಾರ್ಕ್ ಹಿರಿಯ ನಾಗರಿಕರ ನೆಚ್ಚಿನ ತಾಣವಾಗಿತ್ತು . ಬೆಳಿಗ್ಗೆ ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಇದೇ ಪಾರ್ಕಿನಲ್ಲಿ ಕುಳಿತು ಕೊಳ್ಳುತ್ತಿದ್ದರು ಸ್ಟೇಟ್ ಬ್ಯಾಂಕ್ ಹಂಪನಕಟ್ಟೆ ಪರಿಸರದಲ್ಲಿ ಇತರ ದೊಡ್ಡ ಮಟ್ಟಿನ ಪಾರ್ಕ್ ಇಲ್ಲದ ಕಾರಣ ಹೆಚ್ಚಿನ ಮಂದಿ ಇದೇ ಪಾರ್ಕ್ ಉಪಯೋಗಿಸುತ್ತಿದ್ದರು .
ಈ ಪಾರ್ಕಿಗೆ ಆಗಮಿಸಿದ ಹೆಚ್ಚಿನ ಹಿರಿಯ ನಾಗರಿಕರು ಸದ್ಯ ಟಾಗೋರ್ ಪಾರ್ಕ್ ಅವಲಂಬಿಸುತ್ತಿದ್ದಾರೆ ಆದರೆ ಸದ್ಯ ಟಾಗೋರ್ ಪಾರ್ಕ್ ನಲ್ಲಿಯೂ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ