News Karnataka Kannada
Saturday, May 04 2024
ಮಂಗಳೂರು

ಕೋರ್ಟ್ ಆದೇಶ ಪಾಲನೆಗಾಗಿ ಶ್ರೀರಾಮಸೇನೆ ಹೋರಾಟ ಮಾಡುತ್ತಿದೆ: ಆನಂದ ಶೆಟ್ಟಿ

Ananda Shetty
Photo Credit : News Kannada

ಮಂಗಳೂರು: ಶ್ರೀರಾಮಸೇನೆ ಆಜಾನ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಹೋರಾಟ ಮಾಡುತ್ತಿದೆ ಎಂದು ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಜಾನ್​ಗೆ ಬಳಸುವ ಧ್ವನಿವರ್ಧಕ ತೆಗೆಯಲು ನಾವು ಮೇ 9 ತಾರೀಕಿನವರೆಗೆ ಗಡುವನ್ನು ನೀಡಿದ್ದೆವು. ಆಜಾನ್ ಧ್ವನಿವರ್ಧಕ ಸ್ಥಗಿತಗೊಳಿಸಲು ಎಲ್ಲ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ನೀಡಿದ್ದೇವೆ‌. ಆದರೆ, ಯಾವುದೇ ಫಲ ದೊರಕದ ಹಿನ್ನೆಲೆಯಲ್ಲಿ ನಾವು ಅಂದು ಪ್ರತಿಭಟನಾರ್ಥವಾಗಿ ಆಜಾನ್​ನಷ್ಟೇ ದೊಡ್ಡ ಶಬ್ದದಲ್ಲಿ ಸುಪ್ರಭಾತ, ಓಂಕಾರ ನಾದವನ್ನು ಹಾಕಿದ್ದೆವು ಎಂದು ಹೇಳಿದರು.

ಎಲ್ಲರಿಗೂ ನಿಯಮ ಒಂದೇ: ಯಕ್ಷಗಾನದಲ್ಲಿ ಮೈಕ್ ಬಳಸುವ ವಿಚಾರವು ಯಕ್ಷಗಾನ ವೀಕ್ಷಕರು, ಸಂಘಟಕರಿಗೆ ಸಂಬಂಧಪಟ್ಟದ್ದಾಗಿದೆ. ಯಕ್ಷಗಾನ ನಡೆಯುವ ಸಂದರ್ಭ ವೀಕ್ಷಕರಿಗೆ ಮಾತ್ರ ಮೈಕ್​ನ ಅವಶ್ಯಕತೆ ಇರುತ್ತದೆ‌. ಅಲ್ಲದೇ, ಯಕ್ಷಗಾನ ಆಯೋಜಕರಿಗೆ ಮೈಕ್ ಅನುಮತಿ ಪಡೆಯಲು 15 ದಿನಗಳ ಕಾಲಾವಕಾಶ ಇರುತ್ತದೆ. ಸುಪ್ರೀಂಕೋರ್ಟ್ ಆದೇಶ ಎಲ್ಲರಿಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲರೂ ಪಾಲನೆ ಮಾಡಬೇಕಾಗಿದೆ ಎಂದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮಸೂದ್ ಅವರು ರಾಮಸೇನೆಯಲ್ಲ, ರಾವಣ ಸೇನೆಯೆಂಬ ಹೇಳಿಕೆ ಖಂಡನೀಯ. ಪ್ರಮೋದ್ ಮುತಾಲಿಕ್​ರನ್ನು ಉಕ್ರೇನ್​ಗೆ ಹೋಗಲಿ ಎಂದು ಹೇಳಿದ್ದಾರೆ. ಉಕ್ರೇನ್​​​​​ಗೆ ಮುತಾಲಿಕ್ ಅವರಲ್ಲ, ಮಸೂದ್ ಅವರೇ ಹೋಗಲಿ. ನಾವು ರಾಮನನ್ನಷ್ಟೇ ಅಲ್ಲ ರಾವಣನನ್ನೂ ಪೂಜಿಸುತ್ತೇವೆ ಎಂದು ತಿವಿದರು.

ರಾವಣನಿಗಾಗಿಯೇ ದೇಶದ 5 ಕಡೆಗಳಲ್ಲಿ ದೇವಾಲಯಗಳಿದ್ದು, ಮಸೂದ್ ಅವರು ರಾವಣನ ಬಗ್ಗೆ ತಿಳಿಯದೇ ತಪ್ಪು ಮಾತನಾಡಿದ್ದಾರೆ‌. ನಮಗೆ ರಾವಣನ ಮೇಲೆಯೂ ನಂಬಿಕೆಯಿದ್ದು, ಇವರ ಮಾತಿನಿಂದ ನಾವು ಕುಗ್ಗೋದಿಲ್ಲ. ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಮಸೂದ್ ಅವರು ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು