ಕಾವೂರು : ಕುದುರೆಮುಖ ವಸತಿ ಕಾಲನಿ ಬಳಿ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಗೋಪಿನಾಥ್ ಎಂಬವರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತಮ್ಮ ಕರ್ತವ್ಯವನ್ನು ಮುಗಿಸಿ ಕೂಳೂರಿನ ಕುದುರೆಮುಖ ಕಂಪನಿಯಿಂದ ಕಾವೂರಿನಲ್ಲಿ ಇರುವ ಕುದುರೆಮುಖ ಟೌನ್ಶಿಪ್ ಹೋಗುವ ವಿಮಾನ ನಿಲ್ದಾಣ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಬೋಂದೆಲ್ ಕಡೆಯಿಂದ ಬಂದ ಕಾರು ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಗೋಪಿನಾಥ್ ಬೈಕಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದು ಕಾಲು ಹಾಗೂ ಕೈಗೆ ಗಂಭೀರ ಏಟಾಗಿದೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.