ಮಂಗಳೂರು:ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನಗರದ ಖಾಸಗಿ ಕಟ್ಟಡ ದಲ್ಲಿ ನಡೆಯಿತು.
ವಿವಿಧ ಪಕ್ಷಗಳ ಸಂಘಟನೆಗಳ ಸಮ್ಮುಖದಲ್ಲಿ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಾಲಯವನ್ನು ಉದ್ಘಾಟಿಸಿದರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರಿ ಧುರಿಣ ಡಾಕ್ಟರ್ ಎಂ ಎನ್ ರಾಜೇಂದ್ರಕುಮಾರ್ ವಿಜಯಯಾತ್ರೆ ಇಲ್ಲಿಂದಲೇ ಆರಂಭಗೊಂಡಿವೆ ಅತ್ಯಂತ ಪ್ರಾಮಾಣಿಕರಾದ ಜನಸಾಮಾನ್ಯರ ಸೇವಕರಾದ ಡಾಕ್ಟರ್ ಎಂ ಎನ್ ರಾಜೇಂದ್ರಕುಮಾರ್ ಪಕ್ಷಾತೀತ ವ್ಯಕ್ತಿ ಸಮಾಜ ಸೇವಕರು ಯಾವುದೇ ಪಕ್ಷ ಅಗತ್ಯವಿಲ್ಲ ಜನಸಾಮಾನ್ಯರ ಸಹಕಾರವೇ ಶಕ್ತಿಯಾಗಿದೆ ಈ ಶಕ್ತಿಯಿಂದಲೇ ರಾಜಿಂದರ್ ಕುಮಾರ್ ವಿಧಾನಪರಿಷತ್ ಸದಸ್ಯರಾಗಿ ಗೆದ್ದು ಸಚಿವರಾಗಿ ಜನ ಸೇವೆ ಮುಂದುವರೆಸಲಿ ಎಂದು ಆಶಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿ ಸಹಕಾರಿ ಕ್ಷೇತ್ರಕ್ಕೆ ವಿಧಾನಪರಿಷತ್ ನಲ್ಲಿ ಅವಕಾಶ ಕೋಡಿ ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಲಿಲ್ಲ ಹಾಗಾಗಿ ಸಹಕಾರಿಗಳ ಸರ್ವಪಕ್ಷಗಳ ಸಾಮಾಜಿಕ ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದು ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಹಾಗಾಗಿ ಎಲ್ಲ ಪಕ್ಷದವರು ನನ್ನ ಗೆಲುವಿಗೆ ಶ್ರಮಿಸಬೇಕು ಎದ್ದ ಬಳಿಕ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುವೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀನಾಥ್ ಹೆಬ್ಬಾರ್ ,ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ,ಧರ್ಮಗುರುಗಳಾದ ಸಂತೋಷ್ ಕುಮಾರ್ ,ಮಹಮ್ಮದ್ ಕಾಮಿಲ್ ಸಖಾಫಿ ,ಪುರೋಹಿತರಾದ ರಮೇಶ್ ಭಟ್ ,ಹಿರಿಯ ಸಹಕಾರಿಗಳಾದ ವಿನಯ ಕುಮಾರ್ ಸೂರಿಂಜೆ , ಈಶ್ವರ್ ಭಟ್ ಪುತ್ತೂರು , ಉದ್ಯಮಿಗಳಾದ , ರೋಹನ್ ಮೊಂತೆರೋ , ಸಿರಾಜ್ ಅಹ್ಮದ್ ಇನ್ ಲ್ಯಾಂಡ್ ಲಕ್ಷ್ಮೀಶ್ ಭಂಡಾರಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸುಂದರ್ ಮಾಸ್ಟರ್ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ ಪ್ರಮುಖ ಸಂಘಟನೆಗಳ ಮುಖಂಡರಾದ ವರ್ಗೀಸ್ ಕಡಬ , ಜಯಕರ ಶೆಟ್ಟಿ ಇಂದ್ರಾಳಿ , ಕೆ ಪಿ ಥಾಮಸ್ ನೆಲ್ಯಾಡಿ , ಪ್ರಸಾದ್ ಕೌಶಲ್ ಶೆಟ್ಟಿ, ಸುಧೀರ್ ಕುಮಾರ್ , ಪದ್ಮಶೇಖರ್ ಜೈನ್ ಮತ್ತಿತರರು ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.