News Karnataka Kannada
Monday, April 29 2024
ಮಂಗಳೂರು

ಎಂ.ಬಸವಪುನ್ನಯ್ಯ ಬಂಡವಾಳಶಾಹಿ ಸಿದ್ದಾಂತಕಾರರಿಗೆ ಸಿಂಹಸ್ವಪ್ನ; ಡಾ.ಕ್ರಷ್ಣಪ್ಪ ಕೊಂಚಾಡಿ

Sfi
Photo Credit : News Kannada

ಮಂಗಳೂರು : ಸ್ವಾತಂತ್ರ್ಯ ಹೋರಾಟಗಾರರೂ, ತೆಲಂಗಾಣ ರೈತ ಹೋರಾಟದ ರುವಾರಿಯಾಗಿದ್ದ ಎಂ.ಬಸವಪುನ್ನಯ್ಯರವರು ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ದಾಂತಿಕ ನಿರೂಪಣೆಯ ಮೇರು ವ್ಯಕ್ತಿ ಎಂದು ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಅಭಿಪ್ರಾಯ ಪಟ್ಟರು.

ಸ್ವಾತಂತ್ರ್ಯ ಹೋರಾಟಗಾರರೂ, CPIM ಸಂಸ್ಥಾಪಕ ನವರತ್ನಗಳಲ್ಲಿ ಒಬ್ಬರಾದ ಕಾಂ.ಬಸವಪುನ್ನಯ್ಯರವರ 30ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಬಂಡವಾಳಶಾಹಿ ಸಿದ್ದಾಂತಕಾರರಿಗೆ ಸಿಂಹಸ್ವಪ್ನರಾಗಿದ್ದ ಎಂ.ಬಸವಪುನ್ನಯ್ಯರವರು CPIM ಪಕ್ಷ ರೂಪೀಕರಣದ ನವರತ್ನಗಳೆಂಬ 9 ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಕಮ್ಯುನಿಸ್ಟ್ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ ಇವರು, 14 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಪ್ರಖರ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ದಲಿತ ಹಕ್ಕುಗಳ ಸಮಿತಿಯ ನಗರಾಧ್ಯಕ್ಷರಾದ ರಾಧಾಕ್ರಷ್ಣ ಬೊಂಡಂತಿಲರವರು ಮಾತನಾಡುತ್ತಾ, ಬ್ರಿಟೀಷ್ ಸಾಮ್ಯಾಜ್ಯಶಾಹಿಗಳ ವಿರುದ್ದದ ಹೋರಾಟದಲ್ಲಿ ಸಕ್ರೀಯ ಪಾತ್ರ ವಹಿಸಿದ್ದ ಎಂ.ಬಸವಪುನ್ನಯ್ಯರವರು ರೈತ ಕಾರ್ಮಿಕರ ಹೋರಾಟವನ್ನು ಸ್ವಾತಂತ್ರ್ಯ ಚಳುವಳಿಯೊಂದಿಗೆ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ ಕೊನೆಯಲ್ಲಿ ಯೋಗೀಶ್ ಜಪ್ಪಿನಮೊಗರುರವರು ವಂದಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು