ಮಂಗಳೂರು : ಮಂಗಳೂರಿನ ಬೊಂದೆೆಲ್ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಎಂಎಸ್ಎನ್ಐಎಂ) ‘ಸಂಪರ್ಕ್’ ವಾರ್ಷಿಕ ಹಳೆ ವಿದ್ಯಾರ್ಥಿ ಸಮ್ಮೇಳನವನ್ನು ಶನಿವಾರ, 6 ನೇ ನವೆಂಬರ್ 2021 ರಂದು ಆಯೋಜಿಸಿತು. ಎಲ್ಲಾ ಬ್ಯಾಚ್ಗಳ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದು ಮತ್ತು 20ನೇ ಬ್ಯಾಚ್ನ ರ್ಯಾಂಕ್ ಪಡೆದವರನ್ನು ಸನ್ಮಾನಿಸುವುದು ಸಭೆಯ ಉದ್ದೇಶವಾಗಿತ್ತು. 85 ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಡೆಪ್ಯುಟಿ ಗವರ್ನರ್ ಮತ್ತು ಸಂಸ್ಥೆಯ ಮಾರ್ಗದರ್ಶಕ ವಿಠ್ಠಲ್ದಾಸ್ ಲೀಲಾದಾರ್ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಉಪಾಧ್ಯಕ್ಷ ಮಣೆಲ್ ಅಣ್ಣಪ್ಪ ನಾಯಕ್, ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ, ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೀಪ್ ಬಾಳಿಗಾ ಹಾಗೂ ಕಾರ್ಯದರ್ಶಿ ನಂದಿತಾ ಸುನೀಲ್ ಉಪಸ್ಥಿತರಿದ್ದರು.
ತಮ್ಮ ವಯ್ಯಕ್ತಿಕ ಜೀವನದ ಅನುಭವವನ್ನು ಚಿತ್ರಿಸಿದ ವಿಠ್ಠಲ್ದಾಸ್ ಲೀಲಾದಾರ್, ಹಳೆ ವಿದ್ಯಾರ್ಥಿಗಳ ಯಶಸ್ಸು ಸಂಸ್ಥೆಯ ಯಶಸ್ಸನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. “ಜಗತ್ತಿನಾದ್ಯಂತ ಪ್ರಬಲ ಹಳೆ ವಿದ್ಯಾರ್ಥಿ ಸಂಘಗಳು ಮಾತ್ರ ಸಂಸ್ಥೆಗೆ ಆಧಾರ ಸ್ತಂಭಗಳಾಗಿವೆ,” ಎಂದು ಹೇಳಿದರು.
ಮಣೇಲ್ ಅಣ್ಣಪ್ಪ ನಾಯಕ್ ಬ್ಯಾಚ್ವಾರು ಹಳೆ ವಿದ್ಯಾರ್ಥಿಗಳು ಒಟ್ಟಿಗೆ ಸೇರುವಂತೆ ಸಲಹೆ ನೀಡಿದರು. ಸಂಸ್ಥೆಯ ನಿರ್ದೇಶಕಿ ಡಾ.ಮೊಲ್ಲಿ ಎಸ್. ಚೌಧುರಿ ಹಳೆ ವಿದ್ಯಾರ್ಥಿಗಳಿಗೆ ಯಾವುದೇ ಸಮಯದಲ್ಲಿ ಕ್ಯಾಂಪಸ್ಗೆ ಭೇಟಿ ನೀಡಲು, ಕಾರ್ಯಾಗಾರಗಳನ್ನು ನಡೆಸಲು ಮತ್ತು ಪ್ರಸ್ತುತ ಬ್ಯಾಚ್ಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸ್ವಾಗತವಿದೆ ಎಂದರು.
“ಹಳೆ ವಿದ್ಯಾರ್ಥಿಗಳು ಕ್ಯಾಂಪಸ್ಗೆ ಭೇಟಿ ನೀಡುವುದರಿಂದ ಉದ್ಯಮ-ವಿದ್ಯಾವ್ಯವಸ್ಥೆಯ ಅಂತರವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು. ಸಂದೀಪ ಬಾಳಿಗಾ ಸ್ವಾಗತಿಸಿದರು. ನಂದಿತಾ ಸುನೀಲ್ ವಂದಿಸಿದರು. ಸೌಜನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.