ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಿನಾಂಕ 13-02-2017ರಂದು ದಾಖಲಾದ ಗುನ್ನೆ ಸಂಖ್ಯೆ 45/2017 ಕಲಂ 457, 380 ಐಪಿಸಿ ಪ್ರಕರಣದ ಆರೋಪಿ ಇಮ್ರಾನ್ ಖಾನ್ (36) ಮೂಲತಃ. ಶಿವಮೊಗ್ಗದ ಟಿಪ್ಪುನಗರದಲ್ಲಿ ವಾಸವಿರುವ ಇವನು ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿರುತ್ತಾನೆ.
ಆರೋಪಿಯ ಬಂಧನಕ್ಕೆ ನ್ಯಾಯಾಲಯವು ಬಂಧನ ವಾರೆಂಟ್ ಅನ್ನು ಹೊರಡಿಸಿರುತ್ತದೆ ಮತ್ತು ಈತನ ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಯ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿರುತ್ತಾನೆ.
ಈತನ ಪತ್ತೆಗಾಗಿ ಅಭಯ್ ಪ್ರಕಾಶ್ ಸೋಮನಾಳ್, ಪಿಐ ಕುಂಸಿ ಮತ್ತು ಸಂಜೀವ್ ಕುಮಾರ್, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ 02 ವಿಶೇಷ ತಂಡಗಳನ್ನು ರಚಿಸಿದ್ದು, ಸದರಿ ತಂಡಗಳ ನಿರಂತರ ಪ್ರಯತ್ನದಿಂದ ನ 14ರಂದು ಆರೋಪಿ ಇಮ್ರಾನ್ ಖಾನ್ ನನ್ನು ಬಾಂಬೆ, ಮಹರಾಷ್ಟ್ರ ರಾಜ್ಯದಲ್ಲಿ ದಸ್ತಗಿರಿ ಮಾಡಿ ಬಂಧನಕ್ಕೆ ಒಪ್ಪಿಸಿರುತ್ತದೆ.