ಬೆಳ್ತಂಗಡಿ : ಉಜಿರೆಯ ಹೆಸರಾಂತ ಉದ್ಯಮಿ ಉಜಿರೆ ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಕುರ್ಮಾಣಿ ನಿವಾಸಿ ವಸಂತ್ ಗೌಡ ಕುರ್ಮಾಣಿ (61) ಅವರು ಜ.21 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಉಜಿರೆಯ ಪಂಚಮಿ ಲಾಡ್ಜ್, ಪಂಚಮಿ ರೆಸೆಡೆನ್ಸಿ, ಪಂಚಮಿ ಫೂಟ್ ವೇರ್ ನ ಮೂಲ ಮಾಲಕರಾಗಿದ್ದು, ಉಜಿರೆ ಗಣೇಶೋತ್ಸವ ಸಮಿತಿ, ಕನ್ಯಾಡಿ ಸೇವಾ ಭಾರತಿ, ಕನ್ಯಾಡಿ ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದರು. ಉಜಿರೆ ಶಾರದಾ ಮಂಟಪ, ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ, ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಉಜಿರೆ ದ್ವಾರ ನಿರ್ಮಾಣ ಕಾರ್ಯದಲ್ಲೂ ಮುಂಚೂಣಿಯಾಗಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.