ಬಂಟ್ವಾಳ: ಬಡಗಮಿಜಾರು ಗ್ರಾಮದ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರದ “ಪುಣ್ಯ ಭೂಮಿಯನ್ನು ಖರೀದಿಸುವ ಮತ್ತು ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ನಿವೇದನಾ ಪತ್ರ”ದ ಬಿಡುಗಡೆ ಸಮಾರಂಭವು ಅ. 24 ರಂದು ಅಲೇರಿಯಲ್ಲಿ ನಡೆಯಲಿದ್ದು,ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನಿಂದ 5000ಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ತಾಲೂಕು ಸಮಿತಿ ಅಧ್ಯಕ್ಷರಾದ ಅಣ್ಣು ಖಂಡಿಗ ಕಕ್ಯಪದವು ತಿಳಿಸಿದ್ದಾರೆ.
ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು”ನಮ್ಮ ನಡೆ ಅಲೇರಿ ಕಡೆಗೆ” ಸಂಕಲ್ಪದೊಂದಿಗೆ ಅಲೇರಿಗೆ ತೆರಳಲಾಗುವುದು ಎಂದರು.ಬೆಳಿಗ್ಗೆ 8.30 ಕ್ಕೆ ಬಿ.ಸಿ.ರೋಡು ವೃತ್ತದಲ್ಲಿ ಕುಲಬಾಂಧವರು ಸೇರಿ ಅಲ್ಲಿಂದ ಅಲೇರಿಗೆ ತೆರಳಲಾಗುವುದು,ಈ ನಿಟ್ಟಿನಲ್ಲಿ ಬಂಟ್ವಾಳ ತಾ. ಪ್ರತಿ ಗ್ರಾಮಗಳಲ್ಲಿ ಕಾನದ-ಕಟದ ಕುಲಬಾಂಧವರ 65ಕ್ಕೂ ಹೆಚ್ಚಿನ ಗ್ರಾಮ ಸಮಿತಿಗಳು ರಚನೆಯಾಗಿದೆ ಎಂದರು. ಮೂಲಸ್ಥಾನದ ಪುಣ್ಯಭೂಮಿಯನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪದೊಂದಿಗೆ ಒಟ್ಟು 18.28 ಎಕ್ರೆ ಭೂಮಿಯನ್ನು ಸುಮಾರು 5.50ಕೋಟಿ ರೂ.ವಿನಲ್ಲಿ ಖರೀದಿ ಮಾಡಲು ನಿರ್ಧರಿಸಲಾಗಿದೆ. 6 ಜಿಲ್ಲೆಯಲ್ಲಿರುವ ಕುಲಬಾಂಧವರೇ ಈ ಮೊತ್ತವನ್ನು ಭರಿಸಿ ಮೂಲಸ್ಥಾನದ ಪುಣ್ಯ ಭೂಮಿಯನ್ನು ಹಂತಹಂತವಾಗಿ ಖರೀದಿಸಿ ಬಳಿಕ ಅಲ್ಲಿ ದೈವಸ್ಥಾನ,ಅಧ್ಯಯನ ಕೇಂದ್ರ ವಿದ್ಯಾಸಂಸ್ಥೆ, ಕಾನದ ಕಟದ ಕಂಬಳಕರೆ ನಿರ್ಮಾಣ ಸಹಿತ ಹಲವಾರು ಅಭಿವೃದ್ಧಿ ಕಾರ್ಯನಡೆಸಲು ಜಿಲ್ಲಾ ಸಮಿತಿ ನಿಶ್ಚಯಿಸಿದೆ ಎಂದರು. ಮೂಲ ಕ್ಷೇತ್ರದ ಸಮಿತಿ ಅಧ್ಯಕ್ಷ ಶಿವರಾಜ್ ಪಿ.ಬಿ ರವರ ಅಧ್ಯಕ್ಷತೆಯಲ್ಲಿ ನಿವೇದನಾ ಪತ್ರ ಬಿಡುಗಡೆಯ ಸಮಾರಂಭ ನಡೆಯಲಿದ್ದು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ, ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ತಾಲೂಕಿನ ಎಲ್ಲಾ ಗ್ರಾಮ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು ,ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.
ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರ (ರಿ) ಬಡಗಮಿಜಾರು ಇದರ ಬಂಟ್ವಾಳ ತಾ.ಸಮಿತಿ ಗೌರವಾಧ್ಯಕ್ಷ ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ , ಪ್ರಧಾನಕಾರ್ಯದರ್ಶಿಗಳಾದ ಶ್ರೀನಿವಾಸ ಅರ್ಬಿಗುಡ್ಡ, ಕೋಶಾಧಿಕಾರಿ ವೆಂಕಟೇಶ್ ಕೃಷ್ಣಾಪುರ
ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರ (ರಿ) ಬಡಗಮಿಜಾರು ಇದರ ಬಂಟ್ವಾಳ ತಾ.ಸಮಿತಿ ಗೌರವಾಧ್ಯಕ್ಷ ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ , ಪ್ರಧಾನಕಾರ್ಯದರ್ಶಿಗಳಾದ ಶ್ರೀನಿವಾಸ ಅರ್ಬಿಗುಡ್ಡ, ಕೋಶಾಧಿಕಾರಿ ವೆಂಕಟೇಶ್ ಕೃಷ್ಣಾಪುರ
ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ಅರಳ, ಮಾಧವ ವಿ.ಎಸ್ ಕಡೇಶಿವಾಲಯ ರಾಮಚೆಂಡ್ತಿಮಾರ್, ಹರಿಪ್ರಸಾದ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.