ಬಂಟ್ವಾಳ: ತೆಂಗು ಮೌಲ್ಯವರ್ಧನೆಯ ಜೊತೆಗೆ ಅದರ ಔಷಧಿಯ ಗುಣಗಳನ್ನು ಅರಿತುಕೊಳ್ಳಬೇಕು, ಭವಿಷ್ಯದಲ್ಲಿ ತೆಂಗು ಕೃಷಿ ಮತ್ತು ಅದರ ಉಪ ಉತ್ಪನ್ನಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬರಲಿದ್ದು, ತೆಂಗಿನ ತಿರುಳು ಮತ್ತು ಅದರ ಮರು ಬಳಕೆಯ ವಸ್ತುಗಳಿಂದ ಆರೋಗ್ಯ ಕಾಪಾಡಲು ಸಾಧ್ಯ ಎಂದು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದರು.
ಅವರು ಗುರುವಾರ ಬಿ.ಸಿ.ರೋಡ್ ಲಯನ್ಸ್ ಕ್ಲಬ್ ನಲ್ಲಿ ತೋಟಗಾರಿಕಾ ಇಲಾಖೆ ಬಂಟ್ವಾಳ, ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ನಿ. ಬಿ.ಸಿ.ರೋಡ್, ಲಯನ್ಸ್ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ನಡೆದ “ವಿಶ್ವ ತೆಂಗು ದಿನಾಚರಣೆ”ಕಾರ್ಯಕ್ರಮದಲ್ಲಿ ತೆಂಗಿನ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ತೆಂಗು ಉ.ಸೌ.ಸ. ಬಿ.ಸಿ.ರೋಡ್ ಅಧ್ಯಕ್ಷ ರಾಜಾ ಬಂಟ್ವಾಳ್ ಮಾತನಾಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ , ಸಹಕಾರಿಯು ರೈತ ಉತ್ಪಾದಕರ ಕಂಪೆನಿ ಮಾಡುವ ಯೋಜನೆ ಹೊಂದಿದೆ . ಇದರಿಂದ ತೆಂಗು ಕೃಷಿ ಮೌಲ್ಯವರ್ಧನೆಯಾಗಿ ರೈತರಿಗೆ ದೊಡ್ಡಮಟ್ಟದ ಲಾಭವನ್ನು ತಂದುಕೊಡುವುದು ಎಂದರು.
ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಡಾ. ಬಿ.ವಸಂತ ಬಾಳಿಗಾ ಅವರು ತೋಟಗಾರಿಕಾ ಇಲಾಖೆಯಿಂದ ಸಿಗುವ ಉಚಿತ ತೆಂಗಿನ ಸಸಿಗಳನ್ನು ವಿತರಿಸಿ ಶುಭಹಾರೈಸಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ವಿಶ್ವ ತೆಂಗು ದಿನಾಚರಣೆಯ ಕುರಿತು ಪ್ರಸ್ತಾವನೆಗೈದರು.
ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟ ಸಂಯೋಜಕ ದಾಮೋದರ ಬಿ.ಎಂ., ನಿರ್ದೇಶಕರಾದ ನಾರಾಯಣ ಪೂಜಾರಿ ದರ್ಖಾಸು, ಸದಾಶಿವ ಬಂಗುಲೆ, ಶರಣ್ಣಪ್ಪ ಉಮ್ಮರಗಿ, ವಿಠಲ ಬಂಗುಲೆ, ಕೃಷ್ಣ ಭಂಡಾರಿ ಭಕ್ತಂಪುರ, ನಾಗೇಶ ಕಲ್ಯಾರ್, ಶಶಿಕಲಾ ಕೆ.ಭಂಡಾರಿ, ಅಂಬಿಕಾ ಹರೀಶ್ ಉಪಸ್ಥಿತರಿದ್ದರು. ಸಿಪಿಸಿಆರ್ ನ ವಿಜ್ಞಾನಿ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅವರು ತೆಂಗು ಮೌಲ್ಯವರ್ಧನೆ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಇದಕ್ಕು ಮುನ್ನ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ನಿ.ದ ವಾರ್ಷಿಕ ಮಹಾಸಭೆಯು ನಡೆಯಿತು.
ಸೌಹಾರ್ದ ಸಹಕಾರಿ ಕಾರ್ಯನಿರ್ವಹಣಾಧಿಕಾರಿ ಹರ್ಷಿತ್ ಕುಮಾರ್ ಲೆಕ್ಕ ಪತ್ರ ಮಂಡಿಸಿದರು, ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿದರು. ನಿರ್ದೇಶಕ ಪ್ರೇಮನಾಥ ಶೆಟ್ಟಿ ಅಂತರ ವಂದಿಸಿದರು. ಟಿ. ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.