ಬೆಳ್ತಂಗಡಿ : ಕಾರಣಿಕ ಕ್ಷೇತ್ರ ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನದ ನವೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು, ಶಿಲಾಮಯ ಗರ್ಭಗುಡಿಗೆ ಮರದ ಮಾಡಿನ ( ಛಾವಣಿ) ಅಳವಡಿಕೆಯ ಕಾರ್ಯಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ಈ ಸಂಬಂಧ ಕುತ್ತಿ ಪೂಜೆಯನ್ನು ಕನ್ಯಾಡಿ ll ಇಲ್ಲಿನ ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾದ ಕಾಷ್ಠಶಿಲ್ಪಿ ಶಶಿಧರ ಆಚಾರ್ಯ ಹಾಗೂ ಅವರ ಸಹಕಾರಿಗಳು ನೆರವೇರಿಸಿದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ, ಕೋಶಾಧಿಕಾರಿ ಅನಿಲ್ ಕುಮಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಪ್ರಧಾನ ಅರ್ಚಕ ಎ.ಸೋಮನಾಥ ಮಯ್ಯ, ಸಹ ಅರ್ಚಕ ಪ್ರಸನ್ನ ಮಯ್ಯ, ಸಮಿತಿ ಸದಸ್ಯ ಮೋಹನದಾಸ ಮತ್ತಿತರರು ಉಪಸ್ಥಿತರಿದ್ದರು.