ಮಂಗಳೂರು: ಚುನಾವಣೆ ಮುಗಿದು ರಿಲ್ಯಾಕ್ಸ್ ಮೂಡಿನಲ್ಲಿದ್ದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಗುರುವಾರ ಮಂಗಳೂರಿನ ಲಾಲ್ ಭಾಗ್ನಲ್ಲಿರುವ ಭಾರತ್ ಸಿನಿಮಾಸ್ನಲ್ಲಿ ಕೇರಳ ಸ್ಟೋರಿ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ಜಾಗೃತ ವಾಗಲು ಕೇರಳ ಸ್ಟೋರಿ ಒಂದು ಉತ್ತಮ ಸಿನಿಮವಾಗಿದೆ. ನಮ್ಮ ಹಿಂದೂ ಸಂಪ್ರದಾಯ, ಧಾರ್ಮಿಕ ನಂಬಿಕೆಗಳ ಮೇಲೆ ಯಾವ ರೀತಿ ಮುಸ್ಲಿಂ ಭಯೋತ್ಪಾದಕರು, ಮುಸ್ಲಿಂ ಮತೀಯವಾದಿ ಸಂಘಟನೆಗಳು, ಮುಸ್ಲಿಂ ಮತಾಂಧರು ,ಪ್ರೀತಿ, ಪ್ರೇಮ ಹಾಗೂ ಆಮಿಷ ಒಡ್ಡಿ ಹಿಂದೂ ಯುವತಿಯರನ್ನು ಮತಾಂತರಗೊಳಿಸಿ ಭಯೋತ್ಪಾದನೆಗೆ, ವೇಶ್ಯಾವಾಟಿಕೆಗೆ ದೂಡುತ್ತಿವೆ ಎಂಬುದಕ್ಕೆ ಸಿನಿಮಾ ಜ್ವಲಂತ ಸಾಕ್ಷಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು. ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಅದೇರೀತಿ ಹಿಂದೂ ಸಮಾಜ ಈ ನಿಟ್ಟಿನಲ್ಲಿ ಜಾಗೃತರಾಗುವುದು ಅವಶ್ಯಕ ಎಂದರು. ಜತೆಗೆ ಈ ಚಿತ್ರಪ್ರದರ್ಶನಕ್ಕೆ ನಿಷೇಧ ಹೇರಿದ ಹಿಂದೂ ವಿರೋಧಿ ಸರಕಾರಗಳ ನಡೆಯನ್ನು ಟೀಕಿಸಿದರು.
ಮಂಗಳೂರು: ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ ಶಾಸಕ ಡಾ. ಭರತ್ ಶೆಟ್ಟಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.