ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೋಳ್ಯೂರಿನ ಯಕ್ಷಗುರು, ಸಂಘಟಕ, ಕಲಾವಿದ, ಅಧ್ಯಾಪಕ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ಅವರು ಇಂದು ವಿಧಿವಶರಾಗಿದ್ದಾರೆ. ಕೈರಂಗಳ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನಾರಾಯಣ ಹೊಳ್ಳರು, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಯಕ್ಷಗಾನದ ವೇಷಭೂಷಣಗಳ ನಿರ್ವಹಣೆ, ಹವ್ಯಾಸಿ ಕಲಾವಿದರಿಗೆ ಬಣ್ಣ ಹಚ್ಚುವ ಪ್ರಸಾಧನದ ಕೆಲಸದಲ್ಲಿಯೂ ಇವರು ಪರಿಣತಿ ಪಡೆದಿದ್ದರು. ಇವರು ಹಲವಾರು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ, ಯಕ್ಷ ಶಿಕ್ಷಣ ನೀಡಿ, ಕಲಿಸಿ ಬೆಳೆಸಿದ ಗುರುಗಳಾಗಿದ್ದಾರೆ.
ಕಾಸರಗೋಡು: ಯಕ್ಷಗುರು ನಾರಾಯಣ ಹೊಳ್ಳ ನಿಧನ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.