News Karnataka Kannada
Friday, May 10 2024
ಕಾಸರಗೋಡು

ಕಾಸರಗೋಡು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಾಸರಗೋಡು ನಿವಾಸಿ ಕೊಲೆ

Kasargod resident murdered in Bengaluru
Photo Credit : By Author

ಕಾಸರಗೋಡು: ಬೆಂಗಳೂರಿನಲ್ಲಿ ಕಾಸರಗೋಡು ನಿವಾಸಿಯೋರ್ವರನ್ನು ತಂಡವೊಂದು ಇರಿದು ಕೊಲೆಗೈದ ಘಟನೆ ಗುರುವಾರ ರಾತ್ರಿ ನಡೆದಿದೆ. ಜಿಗಣಿ ಟಾಟಾ ಮೆಕಾನಿಕಲ್ ವಿಭಾಗದ ಉದ್ಯೋಗಿ , ಕಾಸರಗೋಡು ರಾಜಪುರ ಚೆರುವೆಲ್ ನ ಸಾನು ಥೋಮ್ಸನ್ ( ೩೧) ಕೊಲೆಗೀಡಾದವನು.

ರಾತ್ರಿ ಕೆಲಸ ಮುಗಿಸಿ ನಡೆದುಕೊಂಡು ವಾಸ ಸ್ಥಳಕ್ಕೆ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಮೂವರ ತಂಡವೊಂದು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದೆ. ಘಟನಾ ಸ್ಥಳದ ಸಿಸಿ ಟಿವಿ ದ್ರಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು , ಕೊಟೇಶನ್ ತಂಡ ಕೃತ್ಯ ನಡೆಸಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಏಳು ವರ್ಷಗಳಿಂದ ಥೋಮ್ಸನ್ ಬೆಂಗಳೂರಿನಲ್ಲಿ ಉದ್ಯೋಗ ದಲ್ಲಿದ್ದು ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತಂಡವು ಇನ್ನೊಬ್ಬ ವ್ಯಕ್ತಿಯ ಕೊಲೆಗೆ ಸಂಚು ನಡೆಸಿತ್ತು . ಆದರೆ ಗುರಿ ತಪ್ಪಿ ಥೋಮ್ಸನ್ ನ ಕೊಲೆ ನಡೆಸಿದೆ ಎಂಬ ಅನುಮಾನವೂ ಉಂಟಾಗಿದೆ.

ಘಟನೆ ಸುದ್ದಿ ತಿಳಿದು ಕಾಸರಗೋಡಿನಲ್ಲಿರುವ ಸಂಬಂದಿಕರು ಬೆಂಗಳೂರಿಗೆ ತೆರಳಿದ್ದು, ಬೆಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಊರಿಗೆ ತರಲಾಗುವುದು. ಆದಿತ್ಯವಾರ ರಾಜಾಪುರ ಹೋಲಿ ಫ್ಯಾಮಿಲಿ ಚರ್ಚ್ ನಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು