ಕಾಸರಗೋಡು: ಅಂಗಡಿಮೊಗರು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಮತ್ತೆ ಮಲಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.
ನೇಮಕಾತಿ ವಿರೋಧಿಸಿ ಶಾಲಾ ವಿದ್ಯಾರ್ಥಿಗಳು, , ಶಾಲಾ ರಕ್ಷಕ – ಶಿಕ್ಷಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಳೆದ ವರ್ಷವೂ ಫಿಸಿಕಲ್ ಸಯನ್ಸ್ ಗೆ ಮಲಯಾಳಿ ಶಿಕ್ಷಕ ರನ್ನು ನೇಮಕ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಇದರಿಂದ ನೇಮಕಾತಿ ಯನ್ನು ತಾತ್ಕಾಲಿಕ ವಾಗಿ ರದ್ದು ಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ತಿರುವನಂತಪುರ ಮೂಲದ ಮಲಯಾಳ ಶಿಕ್ಷಕ ನನ್ನು ನೇಮಕ ಮಾಡಲಾಗಿದ್ದು, ಈ ಆದೇಶ ವಿರುದ್ಧ ಕನ್ನಡಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಾಲಾ ಶಿಕ್ಷಕ ರಕ್ಷಕ ಅಧ್ಯಕ್ಷ ಬಶೀರ್ ಕೊಟ್ಟುಡಲ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಸತೀಶ್ ರೈ, ಚಂದ್ರ ಹಾಸ ಬಿ.ಎಂ, ಶೀನ ಎಂ.ಆರ್, ರಘು ನಾಥ ರೈ, ಮಲ್ಲಿಕಾ ಬಾಡೂರು, ಯಶೋಧಾ, ಜಯ ಬಿ. ಎಂ ಮೊದಲಾದವರು ನೇತೃತ್ವ ನೀಡಿದರು