ಹುಬ್ಬಳ್ಳಿ: ನಿಂತಿದ್ದ ಲಾರಿಗೆ ಎರಡು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ನಗರದ ಹೊರವಲಯದ ತಾರಿಹಾಳ ಬಳಿಯ ಮೆಹಬೂಬ ಡಾಬಾದ ಹತ್ತಿರ ನಡೆದಿದೆ.
ಈ ಅಪಘಾತದಲ್ಲಿ ವಿನೋದ ಕ್ಯಾರಕಟ್ಟಿ (30), ಸುನಿಲ ಭಜಂತ್ತಿ (25), ಮಂಜುನಾಥ ಕ್ಯಾರಕಟ್ಟಿ (35) ಮೃತಪಟ್ಟಿದ್ದಾರೆ, ಪರಶುರಾಮ ನಿಟ್ಟೂರ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗೌಂಡಿ ಕೆಲಸ ಮಾಡಿಕೊಂಡು ತಾರಿಹಾಳದಿಂದ ನಗರಕ್ಕೆ ಪ್ರತ್ಯೇಕವಾಗಿ ಎರಡು ಬೈಕ್ ಗಳಲ್ಲಿ ಬರುತ್ತಿದ್ದಾಗ ಈ ಅವಘಡ ನಡೆದಿದೆ. ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.